ಭಾಗೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಜನ ನಿರ್ದೇಶಕರು ಅವಿರೋಧ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಭಾಗೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮುಂದಿನ ಐದು ವರ್ಷದ ಅವಧಿಗೆ 12 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.
ಸುಭಾಶಚಂದ್ರ ಮುತ್ತಣ್ಣ ಭಾಗೋಡಿ (ಸಾಮಾನ್ಯ), ಶರ್ಪೋದ್ದಿನ್ ಅಬ್ದುಲ್ ಹಮೀದ್ ಭಾಗೋಡಿ (ಸಾಮಾನ್ಯ), ಅಂಬರಾಯ ಹನುಮಂತಪ್ಪ ಕದ್ದರಗಿ (ಸಾಮಾನ್ಯ), ಸಾಬಣ್ಣ ನರಸಪ್ಪ (ಸಾಮಾನ್ಯ), ಇಂದುಶೇಖರ ನಾಗಣ್ಣ ಭಾಗೋಡಿ (ಸಾಮಾನ್ಯ), ಶರಣಬಸಪ್ಪ ಪಾಟೀಲ್ ಶಿವಲಿಂಗಪ್ಪ ಪಾಟೀಲ್ ಭಾಗೋಡಿ (ಸಾಲಗಾರರಲ್ಲದ ಸಾಮಾನ್ಯ), ಮಲ್ಲಿಕಾರ್ಜುನ ಬಸವರಾಜ (ಪರಿಶಿಷ್ಟ ಜಾತಿ), ಸಿದ್ರಾಮಪ್ಪ ಕಾಮಣ್ಣ ಕಾಟಂದೇವರಹಳ್ಳಿ (ಪರಿಶಿಷ್ಟ ಪಂಗಡ), ದೇವಿಂದ್ರ ಮೈಲಾರಿ ಭಾಗೋಡಿ (ಹಿಂದುಳಿದ ವರ್ಗ.ಅ), ವಿಶ್ವನಾಥ ರುದ್ರಪ್ಪ ಭಾಗೋಡಿ (ಹಿಂದುಳಿದ ವರ್ಗ.ಬ), ಶರಣಮ್ಮ ವಿಶ್ವೇಶ್ವರ ಭಾಗೋಡಿ (ಮಹಿಳಾ ಮೀಸಲು), ಲಕ್ಷ್ಮೀಬಾಯಿ ಸಿದ್ರಾಮಪ್ಪ ಕಾಟಂದೇವರಹಳ್ಳಿ (ಮಹಿಳಾ ಮೀಸಲು) ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.