ಚಿತ್ತಾಪುರ ಪುರಸಭೆ 58 ಸಾವಿರ ಉಳಿತಾಯ ಬಜೆಟ್, ಚರ್ಚೆ ಯಾಗದೇ ಬರೀ ಬಜೆಟ್ ಪ್ರತಿ ಓದುವುದಕ್ಕೆ ಸೀಮಿತವಾದ ವಿಶೇಷ ಸಭೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ 2025-26ನೇ ಸಾಲಿನ ಆಯವ್ಯಯ ವಿಶೇಷ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಅವರು 58 ಸಾವಿರ ಉಳಿತಾಯ ಬಜೆಟ್ ಮಂಡಿಸಿದರು.
ಬಜೆಟ್ ಓದಲು ಒಂದುವರೇ ಗಂಟೆ ಸಮಯ ಹಿಡಿಯಿತು, ಆದರೆ ಬಜೆಟ್ ಮೇಲೆ ಯಾವುದೇ ಚರ್ಚೆ ಮಾತ್ರ ಆಗಲಿಲ್ಲ ಬರೀ ಓದುವುದಕ್ಕೆ ಮಾತ್ರ ಸೀಮಿತವಾಯಿತು. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಯಾವುದೇ ವಿಷಯಗಳ ಕುರಿತು ಚರ್ಚೆ ಆಗದೇ ಇರುವುದು ಎದ್ದು ಕಂಡಿತು.
ಆದರೆ ಹಿರಿಯ ಸದಸ್ಯ ಶೀಲಾ ಕಾಶಿ ಮಾತ್ರ ಮಾತನಾಡಿ, ಚಿತ್ತಾಪುರ ಪಟ್ಟಣದಲ್ಲಿ ಶೇ.50 ರಷ್ಟು ವ್ಯಾಪಾರ ವಹಿವಾಟು ಪರವಾನಿಗೆ ಇಲ್ಲದೆ ನಡೆಯುತ್ತಿದೆ. ಹೀಗಾಗಿ ಪುರಸಭೆಗೆ ನಿರೀಕ್ಷಿತ ಆದಾಯ ಹೆಚ್ಚಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಗಮನ ಹರಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.
2025-26 ನೇ ಸಾಲಿನ ಬಜೆಟ್ ನಿರೀಕ್ಷೆ: ಆಸ್ತಿ ತೆರಿಗೆ 94 ಲಕ್ಷ, ನೀರಿನ ಕರ 39.60 ಲಕ್ಷ, ಖಾತಾ ಬದಲಾವಣೆ ಶುಲ್ಕ 70 ಲಕ್ಷ, ಖಾತಾ ಪ್ರತಿಗಳ ಶುಲ್ಕ 30 ಲಕ್ಷ, 15 ನೇ ಹಣಕಾಸು ನಿರೀಕ್ಷೆ 237 ಲಕ್ಷ, ಎಸ್ಎಫ್ಸಿ ಅನುದಾನ (ರಾಜ್ಯ ಸರ್ಕಾರರ ಅನುದಾನ) 12 ಲಕ್ಷ ಅಂದಾಜಿಸಲಾಗಿದೆ ಎಂದು ಹೇಳಿದರು.
ವೆಚ್ಚಗಳ ನಿರೀಕ್ಷೆ: ರಸ್ತೆಗಳ ನಿರ್ವಹಣೆ 70 ಲಕ್ಷ, ಚರಂಡಿ ನಿರ್ಮಾಣ 45 ಲಕ್ಷ, ಕುಡಿಯುವ ನೀರಿನ ಸಮಸ್ಯೆ 10 ಲಕ್ಷ, ಬೀದಿ ದೀಪಗಳು, ಸಂಚಾರಿ ದೀಪಗಳು 35 ಲಕ್ಷ, ಶೇ.24.10 ಪರಿಶಿಷ್ಟ ಜಾತಿ, ಪ.ಪಂಗಡಗಳ ಅಭಿವೃದ್ಧಿ ನಿಧಿ 25 ಲಕ್ಷ, ಶೇ.7 ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಧಿ 6 ಲಕ್ಷ, ಶೇ.5 ಅಂಗವಿಕಲರ ಅಭಿವೃದ್ಧಿ ನಿಧಿ 0.20 ಸಾವಿರ ಅಂದಾಜಿಸಲಾಗಿದೆ.
ರಾಜಸ್ವ ಸ್ವೀಕೃತಿಗಳು 1231.98 ಲಕ್ಷ, ರಾಜಸ್ವ ಪಾವತಿಗಳು 1231.80 ಲಕ್ಷ, ಬಂಡವಾಳ ಸ್ವೀಕೃತಿಗಳು 484 ಲಕ್ಷ, ಬಂಡವಾಳ ಪಾವತಿಗಳು 483.80 ಲಕ್ಷ, ಅಸಾಧಾರಣ ಸ್ವೀಕೃತಿಗಳು 548.90 ಲಕ್ಷ, ಅಸಾಧಾರಣ ಪಾವತಿಗಳು 548.70 ಲಕ್ಷ.ಖರ್ಚು ಹೀಗೆ ಒಟ್ಟಾರೆ 58 ಸಾವಿರ ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಪಟ್ಟಣದ ನಾಗರಿಕರಿಗೆ ಅಗತ್ಯವಾಗಿ ಬೇಕಾದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಚರಂಡಿ, ಬೀದಿ ದೀಪ, ಸ್ವಚ್ಛತೆ ನಿರ್ವಹಣೆಯನ್ನು ಮೊದಲ ಆದ್ಯತೆಯಾಗಿ ಈ ವರ್ಷದ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದಾರೆ.
ಲೆಕ್ಕಾಧಿಕಾರಿ ಕ್ರಾಂತಿದೇವಿ ಬಜೆಟ್ ಪ್ರತಿ ಓದಿದರು. ನಂತರ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಬಜೆಟ್ ಬುಕ್ ಲೇಟ್ ಪ್ರದರ್ಶಿಸಿದರು. ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಉಪಾಧ್ಯಕ್ಷೆ ಅತೀಯಾಬೇಗಂ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಕಾಳಗಿ, ವಿನೋದ ಗುತ್ತೇದಾರ, ಮಹ್ಮದ್ ರಸೂಲ ಮುಸ್ತಫಾ, ಶ್ರೀನಿವಾಸರೆಡ್ಡಿ ಪಾಲಪ್, ಶಿವರಾಜ ಪಾಳೇದ, ರಮೇಶ್ ಬೊಮ್ಮನಳ್ಳಿ, ಶಾಮ ಮೇಧಾ, ಸಂತೋಷ ಚೌಧರಿ, ಜಗದೀಶ ಚವ್ಹಾಣ, ಪ್ರಭು ಗಂಗಾಣಿ, ಶೃತಿ ಪೂಜಾರಿ, ಕಾಶಿಬಾಯಿ ಬೆಣ್ಣೂರಕರ್, ಬೇಬಿಬಾಯಿ ಸುಭಾಷ್, ಸುಮಂಗಲಾ ಸಣ್ಣೂರಕರ್ ಸೇರಿದಂತೆ ಅಧಿಕಾರಿಗಳು ಇದ್ದರು.