ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಮುಗಿಬಿದ್ದ ರೋಗಿಗಳು, ಕೋವಿಡ್ ನಿಯಮಗಳು ಉಲ್ಲಂಘನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕಿದೆ. ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಗಮಿಸಿದ್ದ ರೋಗಿಗಳು ವೈದ್ಯರ ಮೇಲೆ ಮುಗಿಬಿದ್ದ ದೃಶ್ಯ ಬುಧವಾರ ಕಂಡುಬಂತು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಿಂದ ನಿತ್ಯ ನೂರಾರು ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ, ಆದರೆ ಇಲ್ಲಿ ಯಾವುದೇ ಶಿಸ್ತು ಬದ್ಧತೆ ಇಲ್ಲ, ನಿಯಮಗಳ ಪಾಲನೆ ಇಲ್ಲ, ಸರಿಯಾದ ಮಾಹಿತಿ ಕೊರತೆಯಿಂದ ರೋಗಗಳು ಪರದಾಡುವಂತಾಗಿದೆ. ಡಿ ಗ್ರೂಪ್ ಸಿಬ್ಬಂದಿಗಳು ರೋಗಿಗಳನ್ನು ಸಾಲಾಗಿ ನಿಲ್ಲಿಸಿ ವೈದ್ಯರ ಹತ್ತಿರ ಒಬ್ಬೊಬ್ಬರಾಗಿ ಬಿಡಬೇಕು ಆದರೆ ಇಲ್ಲಿ ಎಲ್ಲರೂ ಒಂದೇ ಸಾರಿ ರೋಗಿಗಳು ವೈದ್ಯರ ಮೇಲೆ ಮುಗಿಬೀಳುತ್ತಾರೆ ಇಷ್ಟೇಲ್ಲಾ ಆದರೂ ವೈದ್ಯರು ಮಾತ್ರ ಯಾವುದೇ ಸೂಚನೆ ನೀಡದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಈ ಕುರಿತು ಪ್ರಶ್ನಿಸಿದರೆ ಅಸಂಬದ್ಧವಾಗಿ ಉತ್ತರ ನೀಡಿದ್ದಾರೆ ಎಂದು ದೇವಿಂದ್ರ ಅರಣಕಲ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಕೋವಿಡ್ ನಿಯಮಗಳು ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿದೆ. ಇಲ್ಲಿ ಯಾರೂ ಮಾಸ್ಕ್ ಧರಿಸಿಲ್ಲ ವ್ಯಕ್ತಿಗತ ಅಂತರ ಅಂತು ಮೊದಲೇ ಇಲ್ಲ. ಜನಸಾಮಾನ್ಯರಿಗೆ, ರೋಗಿಗಳಿಗೆ ಅರಿವು ತಿಳುವಳಿಕೆ ಮೂಡಿಸುವ ವೈದ್ಯರೇ ಮೌನವಹಿಸಿದರೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಆಸ್ಪತ್ರೆಯಲ್ಲಿಯೇ ಕೋವಿಡ್ ನಿಯಮಗಳು ಪಾಲನೆ ಆಗಿಲ್ಲ ಎಂದರೆ ಹೇಗೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿಯಮಗಳು ಜಾರಿಗೊಳಿಸಿದೆ. ಈಗಾಗಲೇ 2020 ವರ್ಷ ಯಾರೂ ಮರೆಯುವಂತಿಲ್ಲ ಹೀಗಾಗಿ ಯಾವುದಕ್ಕೂ ನಿರ್ಲಕ್ಷ್ಯ ಮಾಡದೆ ಕಾಲ ಕಾಲಕ್ಕೆ ಜಾರಿಯಾಗುವ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.