Oplus_131072

ಚಿತ್ತಾಪುರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಜಯಂತ್ಯೋತ್ಸವ ಸಮಾರಂಭದಲ್ಲಿ ಜನರಿಲ್ಲದೇ ಕುರ್ಚಿಗಳು ಖಾಲಿ, ಜಗತ್ತಿನಲ್ಲಿ ಪ್ರಪ್ರಥಮ ಪಾರ್ಲಿಮೆಂಟ್ ಸ್ಥಾಪಿಸಿದವರು ಬಸವಣ್ಣನವರು: ಸಂಜಯ ಮಾಕಲ್

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಬ್ರಿಟನ್ ದೇಶದವರು ತಮ್ಮ ಸಂಸತ್ ಪ್ರಥಮ ಎನ್ನುವರು ಆದರೆ ಅದಕ್ಕೂ ಮೊದಲೇ ಕರುನಾಡಿನಲ್ಲಿ ವಿವಿಧ ವರ್ಗಗಳ ಶರಣರ ಅಭಿಪ್ರಾಯ ಪಡೆದು, ಎಲ್ಲರಿಗೂ ಮಾನ್ಯತೆ ನೀಡಿದ ಸಮಾನತೆಯ ಹರಿಕಾರ ಬಸವಣ್ಣನವರು ಜಗತ್ತಿನಲ್ಲಿಯೇ ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪ ನಿರ್ಮಿಸಿದರು ಎಂದು ಉಪನ್ಯಾಸಕ ಸಂಜಯ ಮಾಕಲ್ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892 ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ದೇಶದಲ್ಲಿ ಆರ್ಯರು ಬರೋಕೆ ಮುಂಚೆ ನಮ್ಮಲ್ಲಿ ಒಗ್ಗಟ್ಟು ಇತ್ತು, ಅವರು ಬಂದ ಮೇಲೆ ಒಡೆದು ಆಳ್ತಾ ಇದ್ದಾರೆ, ಅವರು ಒಡೆದು ಆಳುವುದೇ ಧರ್ಮ ಮಾಡಿದ್ದಾರೆ ಎಂದರು.

ಬುದ್ಧ, ಬಸವಣ್ಣ, ಅಂಬೇಡ್ಕರ್ ಮೂವರು ಜಾತಿ ಪದ್ಧತಿ, ಅಸಮಾನತೆ ವಿರುದ್ಧ ಹೋರಾಡಿದವರು. ಆದರೆ ದುರ್ದೈವ ಇನ್ನೂ ಅದು ಚಾಲ್ತಿಯಲ್ಲಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ್ ಶಿವಾಚಾರ್ಯರು ಆಶೀರ್ವಚನ ನೀಡಿ, ಪ್ರಪಂಚಕ್ಕೆ ವಚನ ಸಾಹಿತ್ಯ ಸಂಪತ್ತು ಕೊಟ್ಟ ಮಹಾನ್ ಶರಣ ಬಸವಣ್ಣನವರು, ಸಮಾನತೆಯ ಸಮಾಜಕ್ಕಾಗಿ ಜಾತಿ ಪದ್ಧತಿ ನಿರ್ಮೂಲನೆ ಮಾಡಲು ಅವರು ಮಾಡಿದ ಕ್ರಾಂತಿ ಹೊಸ ಬದಲಾವಣೆಗೆ ನಾಂದಿ ಹಾಡಿತು ಎಂದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕಾರ್ಯದರ್ಶಿ ರಮೇಶ ಮರಗೋಳ, ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಸಮಾರಂಭ ಉದ್ಘಾಟಿಸಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಮಾತನಾಡಿದರು.

ವೇದಿಕೆಯಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ಬೊಮ್ಮನಳ್ಳಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಮ್ ಪಾಶಾ, ಆನಂದ ಪಾಟೀಲ ನರಿಬೋಳ, ಶಾಂತಣ್ಣ ಚಾಳಿಕಾರ ಇದ್ದರು.

ಕಾರ್ಯಕ್ರಮದಲ್ಲಿ ಮಲ್ಲರೆಡ್ಡಿ ಗೋಪಸೇನ್, ನಾಗಣ್ಣ ವಡ್ಡಡಗಿ, ಬಸ್ಸಣ್ಣ ತಳವಾರ, ಬಸವರಾಜಗೌಡ ಹೊನ್ನಾಳ, ಬಸವರಾಜ ಕಾಳಗಿ, ಬಸವರಾಜ ಹೂಗಾರ್, ಚಂದ್ರಶೇಖರ ಉಟಗೂರ, ಬಸವರಾಜ ಸಂಕನೂರ, ಅನಿಲ್ ವಡ್ದಡಗಿ, ಶ್ರೀಕಾಂತ್ ಸುಲೇಗಾಂವ, ನಾಗರಾಜ ಕಡಬೂರ, ನಾಗರಾಜ್ ರೇಷ್ಮೆ, ಪ್ರಸಾದ್ ಅವಂಟಿ, ನಾಗರಾಜ್ ಹೂಗಾರ, ಅಂಬರೀಷ್ ಸುಲೇಗಾಂವ್, ಸಾಯಿನಾಥ ನಿಪ್ಪಾಣಿ, ವೀರಸಂಗಪ್ಪ ಸುಲೇಗಾಂವ, ರಾಜು ಬೆಣ್ಣಿ, ‌ಸೋಮು ಟೋಕಾಪೂರ, ರೇವಣಸಿದ್ದಪ್ಪ ಕುರಕೋಟಿ, ಸಿದ್ದು ರಾಜಾಪುರ ಸೇರಿದಂತೆ ಇತರರು ಇದ್ದರು.

ಸಂತೋಷ ಶಿರಾನಾಳ ನಿರೂಪಿಸಿದರು, ಡಾ. ಶಂಕರ ಕಣ್ಣಿ ಸ್ವಾಗತಿಸಿದರು, ಗ್ರೇಡ್ -2 ತಹಸೀಲ್ದಾರ್ ರಾಜಕುಮಾರ ಮರತೂರಕರ್ ವಂದಿಸಿದರು.

ಜನರಿಲ್ಲದೇ ಕುರ್ಚಿಗಳು ಖಾಲಿ ಖಾಲಿ: 

ಚಿತ್ತಾಪುರ ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಬಸವೇಶ್ವರರ ಜಯಂತ್ಯೋತ್ಸವ ಸಮಾರಂಭದಲ್ಲಿ ಮುಖಂಡರು ಹಾಗೂ ಜನರಿಲ್ಲದೇ ಕುರ್ಚಿಗಳು ಖಾಲಿ ಖಾಲಿಯಾಗಿ ಕಂಡುಬಂದವು. ಇದು ವೀರಶೈವ ಲಿಂಗಾಯತ ಸಮುದಾಯಕ್ಕೆ ಹಾಗೂ ತಾಲೂಕು ಆಡಳಿತಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಕುರ್ಚಿಗಳು ಖಾಲಿ ಇದ್ದ ಕಾರಣ ನಿರೂಪಕರು ಎತ್ತುಗಳ ಮಾಲಿಕರು ದಯವಿಟ್ಟು ಕುರ್ಚಿಗಳಲ್ಲಿ ಆಸೀನರಾಗಿ ಎಂದು ಮನವಿ ಮಾಡಿಕೊಂಡರೂ ಯಾರೂ ಕೂಡಲಿಲ್ಲ ಹೀಗಾಗಿ ಬೆರಳೆಣಿಕೆಯಷ್ಟು ಜನರು ಮಾತ್ರ ಆಸೀನರಾಗಿರುವುದು ಎದ್ದು ಕಂಡಿತು. ಇದು ತೀವ್ರ ಚರ್ಚೆಗೆ ಗ್ರಾಸವನ್ನುಂಟು ಮಾಡಿತು.

Spread the love

Leave a Reply

Your email address will not be published. Required fields are marked *

error: Content is protected !!