Oplus_131072

ಚಿತ್ತಾಪುರದಲ್ಲಿ ಸರಣಿ ಕಳ್ಳತನ ಬೆಚ್ಚಿಬಿದ್ದ ಜನತೆ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರಿಂದ ತಪಾಸಣೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ವೆಂಕಟೇಶ್ವರ ನಗರದಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನವಾದ ಪ್ರಕರಣ ಸೋಮವಾರ ಬೆಳ್ಳಂ ಬೆಳಗ್ಗೆ ಬಯಲಿಗೆ ಬರುತ್ತಿದ್ದಂತೆ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.

ಗುರುನಾಥ್ ಹಿಟ್ಟಿನ ಗಿರಣಿ ಮನೆಯಲ್ಲಿ 2 ತೊಲೆ ಬಂಗಾರ, 20 ತೊಲೆ ಬೆಳ್ಳಿ ಹಾಗೂ 10 ಸಾವಿರ ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.

ಅದೇ ರೀತಿ ದೂಳಯ್ಯ ಸಿದ್ದಯ್ಯಸ್ವಾಮಿ ಮನೆಯಲ್ಲಿ 3 ತೊಲೆ ಬಂಗಾರ, 9 ತೊಲೆ ಬೆಳ್ಳಿ ಮತ್ತು 30 ಸಾವಿರ ಕಳ್ಳತನವಾಗಿದೆ. ಶಂಕರ ಕೊಳಕೂರ ಮನೆಯ ಕೀಲಿ ಮುರಿದು ಕಳ್ಳತನ ಮಾಡುವ ಪ್ರಯತ್ನ ಮಾಡಿದ್ದಾರೆ ಆದರೆ ಯಾವುದೇ ಕಳ್ಳತನ ಆಗಿಲ್ಲ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಕಳ್ಳತನ ವಿಷಯ ತಿಳಿಯುತ್ತಿದ್ದಂತೆಯೇ ಕಲಬುರ್ಗಿ ಯಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತಪಾಸಣೆ ನಡೆಸಿದರು. ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಕ್ರೈಂ ಪಿಎಸ್ಐ ಚಂದ್ರಾಮಪ್ಪ, ಅವರು ಪರೀಶೀಲನೆ ನಡೆಸಿದರು. ಎಚ್.ಸಿ ಲಾಲ್ ಅಹ್ಮದ್, ದತ್ತು ಜಾನೆ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!