Oplus_131072

ಶಹಾಪುರ ಜನೌಷಧಿ ಕೇಂದ್ರ ಸ್ಥಗಿತ ಮಾಡಲು ತೀರ್ಮಾನ ಕೈಗೊಂಡು ಕಾಂಗ್ರೆಸ್ ಸರ್ಕಾರ ನಿರ್ಧಾರ ಖಂಡಿಸಿ ಬಿಜೆಪಿ ಪ್ರತಿಭಟನೆ 

ನಾಗಾವಿ ಎಕ್ಸಪ್ರೆಸ್ 

ಶಹಾಪುರ: ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರವನ್ನು ಸ್ಥಗಿತಗೊಳಿಸಲು ತೀರ್ಮಾನ ತೆಗೆದುಕೊಂಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಮುಖಂಡರು ನಗರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಹಾಗೂ ನಗರದ ಖ್ಯಾತ ವೈದ್ಯರಾದ ಡಾ. ಚಂದ್ರಶೇಖರ ಸುಬೇದಾರ ಅವರು ಮಾತನಾಡಿ, ಬಡಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ‌ ಪ್ರಧಾನ ಮಂತ್ರಿಗಳು ತೆಗೆದುಕೊಂಡಿರುವ ಈ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರವು ಉದ್ದೇಶಪೂರ್ವಕವಾಗಿ ತೆಗೆದು ಹಾಕಲು ನಿರ್ಧರಿಸಿದೆ ಇದರಿಂದ ಬಡಜನರ ಮೇಲೆ‌ ಕಾಂಗ್ರೆಸ್ ಬರೆ ಎಳೆಯುತ್ತಿದೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ನಗರ ಮಂಡಲ‌ ಅಧ್ಯಕ್ಷ ಚಂದ್ರಶೇಖರ ಯಾಳಗಿ, ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತ್ತಿಕಟಿಗಿ, ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಕೋನೆರ, ಅಡಿವೆಪ್ಪ ಜಾಕಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಯುವ ಮುಖಂಡ ಅಪ್ಪುಗೌಡ ಪಾಟೀಲ ಯಾಳಗಿ, ಹಿರಿಯ ಮುಖಂಡ ಮಲ್ಲಿಕಾರ್ಜುನ ಕಂದಕೂರ, ಬಸವರಾಜ ಆರುಣಿ, ಗ್ರಾಮೀಣ ಮಂಡಲ‌ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಹುಲಕಲ್, ಸೋಪಣ್ಣ ಸಗರ, ಅವಿನಾಶ ಗುತ್ತೇದಾರ, ಸಿದ್ದಯ್ಯ ಸ್ವಾಮಿ ಹಿರೇಮಠ, ರಾಘವೇಂದ್ರ ಯಕ್ಷಂತಿ, ಶರಣು ಟೊಕಾಪೂರ, ಪ್ರಭು ದೇವಿನಗರ, ಹುಸನಪ್ಪ ಅಜ್ಜಕೊಲ್ಲಿ, ಸ್ನೇಹಲ್‌ ಎಕಬೋಟೆ, ಲಕ್ಷ್ಮೀಕಾಂತ ಬಿರಾಳ, ಮಲ್ಲಿನಾಥ ಬಡಿಗೇರ, ಸುನೀಲ್‌ ನಾಲವಡಿಗಿ, ಭೀಮರಾಯ ಕೋಲ್ಕರ್, ಮಲ್ಕಣ್ಣ ಬಗಲಿ, ಚಿದಾನಂದ ಪಾಟೀಲ, ಮಾನಪ್ಪ ಸೂಗೂರ, ನಿಖಿಲ್ ಕುಮಾರ ಸಗರ, ಅಂಬಾದಾಸ ಯಾಳಗಿ, ದೇವಿಂದ್ರಪ್ಪ ರಾಂಪೂರ, ಮಂಜುನಾಥ ಅಲಬಾನೂರ್, ಓಂ ಪ್ರಕಾಶ ಬೀಗುಡಿ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು

Spread the love

Leave a Reply

Your email address will not be published. Required fields are marked *

You missed

error: Content is protected !!