ಕಂಚಗಾರಹಳ್ಳದ ಗುರುಲಿಂಗೇಶ್ವರರ 21 ನೇ ಪುಣ್ಯಸ್ಮರಣೆ ನಿಮಿತ್ತ ಕಬ್ಬಡ್ಡಿ ಪಂದ್ಯಾವಳಿ, ವಿಜೇತ ತಂಡಗಳಿಗೆ ಮಲ್ಲಯ್ಯ ಸ್ವಾಮಿಗಳಿಂದ ಬಹುಮಾನ ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದ ಕಂಚಗಾರಹಳ್ಳದ ಪರಮ ಪೂಜ್ಯ ಶ್ರೀ ಲಿಂ. ಗುರುಲಿಂಗೇಶ್ವರರ 21 ನೇ ಪುಣ್ಯಸ್ಮರಣೆ ನಿಮಿತ್ತವಾಗಿ ಕಲ್ಪಶ್ರೀ ರತ್ನ ಮಲ್ಲಯ್ಯ ಸ್ವಾಮಿಗಳ ನೇತೃತ್ವದಲ್ಲಿ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದಲ್ಲಿ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಹಾಗೂ ಕಬಡ್ಡಿ ಪಂದ್ಯಾವಳಿ ನಡೆಯಿತು.
ಪಂದ್ಯಾವಳಿಯಲ್ಲಿ ದಿಗ್ಗಾಂವ, ಇಟಗಾ ಗ್ರಾಮಗಳ 14 ತಂಡಗಳು ಭಾಗವಹಿಸಿದ್ದವು. ಭಾನುವಾರದ ರಾತ್ರಿ 11 ಗಂಟೆಯಿಂದ ಪ್ರಾರಂಭಗೊಂಡ ಕಬಡ್ಡಿ ಪಂದ್ಯಾವಳಿ 3.00 ಗಂಟೆಯವರೆಗೆ ನಡೆದಿದ್ದು , ದೈಹಿಕ ಶಿಕ್ಷರಾದ ದೇವಿಂದ್ರಪ್ಪ ದೊರೆ, ಶಿವಕುಮಾರ್, ವಿಶ್ವನಾಥ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಅದರಲ್ಲಿ ಪ್ರಥಮ ಸ್ಥಾನ ಇಟಗಾ ಗ್ರಾಮ ಪಡೆದುಕೊಂಡರೆ ದ್ವಿತೀಯ ಸ್ಥಾನ ದಿಗ್ಗಾಂವ ಗ್ರಾಮದ ಬ್ಲೂ ಸ್ಟಾರ್ ತಂಡದವರು ಪಡೆದುಕೊಂಡಿದ್ದಾರೆ. ಪ್ರಥಮ, ದ್ವಿತೀಯ ಹಾಗೂ ಬೆಸ್ಟ್ ರೈಡರ್, ಕ್ಯಾಚರ್ ಗಳಿಗೆ ಪರಮ ಪೂಜ್ಯ ಶ್ರೀ ಕಲ್ಪಶ್ರೀ ರತ್ನ ಮಲ್ಲಯ್ಯ ಸ್ವಾಮಿಗಳು ಬಹುಮಾನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರಳಯ್ಯ ಬಡಿಗೇರ , ಉಪಾಧ್ಯಕ್ಷ ಜಗನ್ನಾಥ್ ಸೀದಾ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮಂತ ಗುತ್ತೇದಾರ, ಸದಸ್ಯರಾದ ಚೆನ್ನವೀರ ಕಣ್ಣಿಗಿ , ಮುಖಂಡರಾದ ಶೇಖರ್ ಅಣಿಕೇರಿ , ಬನಶಂಕರ ಕೋರಿ, ಮಲ್ಲಶೆಟ್ಟೆಪ್ಪ ಸಂಗಾವಿ, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಪವಾರ್ ದಿಗ್ಗಾಂವ, ದೈಹಿಕ ಶಿಕ್ಷಕರಾದ ಜಗನ್ನಾಥ್ ಕಲಿಕೇರಿ, ಮಹೇಶ್ ದೇವರ ಸೇರಿದಂತೆ ಇತರರಿದ್ದರು.