ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ ಅವರಿಗೆ ರಾಜ್ಯ ಸ್ಪಾರ್ಕ್ ನಿರೂಪಣಾ ರತ್ನ ಪ್ರಶಸ್ತಿ ಪ್ರದಾನ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಸೂರ್ಯ ಫೌಂಡೇಷನ ಬೆಂಗಳೂರು ಸ್ಪಾರ್ಕ್ ಅಕಾಡೆಮಿ ಕೊಡ ಮಾಡುವ 2025 ನೇ ಸಾಲಿನ ರಾಜ್ಯ ಮಟ್ಟದ ಸ್ಪಾರ್ಕ್ ನಿರೂಪಣಾ ರತ್ನ ಪ್ರಶಸ್ತಿಗೆ ಕಲಬುರಗಿಯ ಜಿಲ್ಲೆಯ ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ ಅವರಿಗೆ ಪ್ರಧಾನ ಮಾಡಲಾಯಿತು.
ಇವರು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದು ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ, ಭಾಷಣಕಾರರಾಗಿ, ಶೈಕ್ಷಣಿಕ ಮಾರ್ಗದರ್ಶಿಯಾಗಿ, ಸುಗಮಕಾರರಾಗಿ ತರಬೇತುದಾರರಾಗಿ, ಬರಹಗಾರಾಗಿ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿದ್ದು, ಇವರ ಒಟ್ಟಾರೆ ಸಾಮಾಜಿಕ, ಶೈಕ್ಷಣಿಕ ಸಾಧನೆಗೆ ಸೂರ್ಯ ಫೌಂಡೇಷನ ಬೆಂಗಳೂರು ಸ್ಪಾರ್ಕ್ ಅಕಾಡೆಮಿ ಕೊಡ ಮಾಡುವ 2025ನೇ ಸಾಲಿನ ರಾಜ್ಯ ಮಟ್ಟದ ಸ್ಪಾರ್ಕ್ ನಿರೂಪಣಾ ರತ್ನ ಪ್ರಶಸ್ತಿಯನ್ನು ಮೈಸೂರಿನ ರಾಜ್ಯ ಮಟ್ಟದ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಾಡಲಾಯಿತು.
ಕೆ.ಎಂ.ವಿಶ್ವನಾಥ ಮರತೂರ ಅವರು ಪ್ರಜ್ಞಾ, ಪ್ರೇರಣೆ ಮತ್ತು ಪ್ರೋತ್ಸಾಹ ಜನರ ಜೀವನವನ್ನು ಬದಲಿಸುವತ್ತ ಒಂದು ದಿಟ್ಟ ಹೆಜ್ಜೆ ಎಂದು ಬಲವಾಗಿ ನಂಬಿದ್ದಾರೆ. ಸಮಾಜದ ಧನಾತ್ಮಕ ಅಂಶಗಳನ್ನು ಅನ್ವೇಷಿಸುತ್ತಾ, ಅದನ್ನು ಮಕ್ಕಳು, ಯುವಕರು, ಪಾಲಕರು, ಶಿಕ್ಷಕರು, ಸರಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಇತರೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಇವರಿಂದ ಸಮಾಜದ ಅನೇಕರು ಸ್ಪೂರ್ತಿ ಪಡೆಯುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಪಾರ್ಕ್ ಅಕಾಡೆಮಿಯ ಪದಾದಿಕಾರಿಗಳಾದ ಮಹೇಶ್ ಪಿ, ಸಂದೀಪ ವಿಜಯನ್, ಸತೀಶ್ ಬಿ.ಕೆ. ರಾಜೇಶ್ವರಿ, ಸತ್ಯವತಿ ಹಾಜರಿದ್ದರು.