ಕಾಳಗಿ ಪಟ್ಟಣದಲ್ಲಿ ಮಹಾಶಿವರಾತ್ರಿಯ ಸಂಬ್ರಮ, ಶಿವನ ಭಕ್ತಿಯಲ್ಲಿ ಮಿಂದೆದ್ಧ ಭಕ್ತರು
ನಾಗಾವಿ ಎಕ್ಸ್ಪ್ರೆಸ್ ಕಾಳಗಿ
ಶಿವರಾತ್ರಿ ಹಬ್ಬವನ್ನು ಬುಧವಾರ ಪಟ್ಟಣದಲ್ಲಿ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಭಕ್ತರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಸಹಸ್ರ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.
ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ನಸುಕಿನ ಜಾವದಿಂದ ರಾತ್ರಿವರೆಗೂ ವಿವಿಧಡೆಯಿಂದ ಆಗಮಿಸಿದ ಸಹಸ್ರಾರು ಭಕ್ತರು ಕತೃ ನೀಲಕಂಠ ಕಾಳೇಶ್ವರ ಶಿವಲಿಂಗಕ್ಕೆ ಅರ್ಚಕ ಕಾಳೇಶ್ವರ ಮಹಾರಾಜ, ದತ್ತು ಮಹಾರಾಜ, ಜಯಪ್ರಕಾಶ್ ಜೋಶಿ ವೈದಿಕತ್ವದಲ್ಲಿ ವಿಶೇಷ ಪೂಜೆ ಅಭಿಷೇಕ ಅರ್ಚನೆ ಮಹಾ ಮಂಗಳಾರತಿ ಜರುಗಿದವು.
ಸಂಜೆಯಾಗುತ್ತಲೆ ಪಟ್ಟಣದ ಹಿರೇಮಠದಲ್ಲಿ ಡಾ. ಬಸವರಾಜ ಮಠಪತಿ ವೈದಿಕತ್ವದಲ್ಲಿ ನೀಲಕಂಠ ಮರಿದೇವರು ಸಾನಿದ್ಯದಲ್ಲಿ ಮಹಾರಾಷ್ಟ್ರ ಭಕ್ತರಿಂದ ಸಾಮೂಹಿಕ ವಿಶೇಷ ಲಿಂಗಪೂಜೆ ಜರುಗಿತು.
ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನ ಆವರಣದಲ್ಲಿ ಶಿವನ ಹೆಸರಲ್ಲಿ ಉಪವಾಸ ವೃತ ಆಚರಣೆ ಮಾಡಿದವರಿಗೆ ಕಜ್ಜೂರಿ, ಬಾಳೆಹಣ್ಣು, ಸಾಬುದಾನಿ, ಮಂಡಕ್ಕಿ, ವಗ್ಗರಣಿ ಪ್ರಸಾದವನ್ನು ವಿವಿಧ ಸಂಘಟನೆಕಾರರು, ಭಕ್ತರು ವಿತರಿಸಿದರು. ಇದನ್ನು ಸೇವನೆ ಮಾಡುವ ಮೂಲಕ ಆಚರಣೆ ಕೊನೆ ಹಾಡಿದರು.
ಸೂಗುರ ವೆಂಕಟೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಸನ್ನತದಾಸ ಮಹಾರಾಜ್, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ತಹಶಿಲ್ದಾರ ಘಮಾವತಿ ರಾಠೋಡ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ವಿಶ್ವನಾಥ ವನಮಾಲಿ, ಬಸಯ್ಯಸ್ವಾಮಿ ಪ್ಯಾಟಿಮಠ, ನೀಲಕಂಠ ಮಡಿವಾಳ, ವೀರೇಶ ಸಿಂಗಶೆಟ್ಟಿ, ಸಂತೋಷ ಪತಂಗೆ, ದತ್ತು ಗುತ್ತೇದಾರ ಸೇರಿದಂತೆ ಸಾವಿರಾರು ಭಕ್ತರು ಇದ್ದರು.