ಕಲಬುರಗಿ-ಯಾದಗಿರ ಮಾರ್ಗ ಮಧ್ಯದ ಮಾಲಗತ್ತಿ ಹತ್ತಿರ ಎಲ್ಲಾ ಸಾರಿಗೆ ಬಸ್ಸುಗಳ ನಿಲುಗಡೆಗೆ ಕ್ರಮಕ್ಕೆ ಪ್ರಯಾಣಿಕರ ಸಂತಸ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರಗಿ ಯಿಂದ ಯಾದಗಿರಿ ಕಡೆ ಹೋಗುವ ಮಾರ್ಗ ಮಧ್ಯದ ಮಾಲಗತ್ತಿ ಹತ್ತಿರ ಎಲ್ಲಾ ಸಾರಿಗೆ ಬಸ್ಸುಗಳ ನಿಲುಗಡೆ ಇದ್ದರೂ ಪ್ರಯಾಣಿಕರು ಕೈ ಮಾಡಿ ನಿಲ್ಲಿಸುವಂತೆ ಮನವಿ ಮಾಡಿದ್ದರೂ ನಿಲ್ಲಿಸದೇ ಹಾಗೆಯೇ ಮುಂದು ಹೋಗುತ್ತಿದ್ಜವು ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು ಇದನ್ನು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧಿಕಾರಿಗಳ ಗಮನಕ್ಕೆ ತಂದಾಗ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಈ ಮಾರ್ಗದಿಂದ ಸಂಚರಿಸುವ ಎಲ್ಲಾ ಸಾರಿಗೆ ಬಸ್ಸುಗಳ ನಿಲ್ಲಿಸುವ ಕ್ರಮ ಕೈಗೊಂಡಿದ್ದಾರೆ ಎಂದು ಹಿರೋಡೇಶ್ವರ ದೇವಸ್ಥಾನದ ವಕ್ತಾರ ಈಶ್ವರ ಮುಗುಳನಾಗಾಂವ ತಿಳಿಸಿದ್ದಾರೆ.
ಬಸ್ ನಿಲುಗಡೆ ಕ್ರಮಕ್ಕೆ ಮುಖಂಡರು ಸ್ವಾಗತಿಸಿದ್ದಾರೆ ಹಾಗೂ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಂಚಾರ ನಿಯಂತ್ರಕ ಅಂಬರಾಯ, ಭೀಮಣ್ಣ ಸಂಚಾರ ನಿರೀಕ್ಷಕ ಭೀಮಣ್ಣ, ಸಂಚಾರ ನಿರೀಕ್ಷಕ ಸಿದ್ರಾಮ್ ಬಿರಾದಾರ್, ಪಂಡರಿ ಚೌಹಾಣ್ ಸಂಚಾರಿ ನಿಯಂತ್ರಕ ಪಂಡರಿ ಚೌಹಾಣ್ ಯಾದಗಿರಿ, ಶ್ರೀನಿವಾಸ್ ಕುಲಕರ್ಣಿ, ರೇವಣಸಿದ್ದ ಸಾವಳ್ಳಿ, ಚಿರಚಂದ್ದುಗೊಂಡ, ಸುನಿಲ್ ಪಂಡಿತ್, ಮಲ್ಲಿಕಾರ್ಜುನ್ ಶೀನುರ್, ನಿತೀಶ್ ರಾವೂರ್, ಶಿವಪ್ಪ ಬಾಲಕ್, ಸಿದ್ದಪ್ಪ ಅಲ್ಲೂರ್ ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದರು.