ಮುಡಬೂಳ ಕುಸ್ತಿ ಪಂದ್ಯಾಟದಲ್ಲಿ ವಿಜೇತ ಸಾಬಣ್ಣ ಡಿಗ್ಗಿ ಅವರಿಗೆ ಬೆಳ್ಳಿ ಖಡ್ಗ ಬಹುಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮುಡಬೂಳ ಸೀಮೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾಟದಲ್ಲಿ ವಿಜೇತರಾದ ಇಟಗಾ ಗ್ರಾಮದ ಸಾಬಣ್ಣ ಡಿಗ್ಗಿ ಅವರಿಗೆ ಗ್ರಾಮದ ಮುಖಂಡರು ಬೆಳ್ಳಿ ಖಡ್ಗ ಬಹುಮಾನ ನೀಡಿ ಅಭಿನಂದನೆಗಳು ಸಲ್ಲಿಸಿದರು.
ಗ್ರಾಮದ ಮುಖಂಡರಾದ ಡಿ.ಕೆ.ಪಾಟೀಲ, ಸಂಗಣ್ಣಗೌಡ ಪಾಟೀಲ, ಸಿದ್ದು ಸಂಗಾವಿ, ಪ್ರಕಾಶ್ ಹಂಚನಾಳ, ಮಲ್ಲಿಕಾರ್ಜುನ ಸಂಗಾವಿ, ಸಾಬಣ್ಣ ಸಿದ್ರಾಮಗೋಳ, ಇಟಗಾ ಗ್ರಾಮದ ಮುಖಂಡರಾದ ನಿಂಬೇಣ್ಣಗೌಡ ಮಾಲಿ ಪಾಟೀಲ, ಸಿದ್ರಾಮ ಕೋಗನೂರ, ಮೈಲಾರಿ ಡಿಗ್ಗಿ ಸೇರಿದಂತೆ ಇತರರು ಇದ್ದರು.