ಶ್ರೀ ಕ್ಷೇತ್ರ ನಾಲವಾರ ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷ: ಶಾಸಕ ರಾಜುಗೌಡ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಶ್ರೀ ಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠವು ನಂಬಿ ಬರುವ ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷವಾಗಿದೆ ಇಲ್ಲಿ ಬರುವ ಪ್ರತಿಯೊಬ್ಬ ಭಕ್ತರು ಗುರುವಿನ ಆಶೀರ್ವಾದದಿಂದ ಬದುಕಿನಲ್ಲಿ ಸದ್ಗತಿ ಸಾಧಿಸಲು ಸಾಧ್ಯವಾಗುತ್ತಿದೆ ಎಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ್ ಅವರು ಹೇಳಿದರು.
ಯುಗಾದಿಯ ಅಮಾವಾಸ್ಯೆ ದಂದು ಶ್ರೀ ಕ್ಷೇತ್ರ ನಾಲವಾರ ಸದ್ಗುರು ಶ್ರೀ ಕೂರಿಸಿದ್ದೇಶ್ವರ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ ಮಾಸಿಕ ಶಿವಾನುಭವ ಚಿಂತನ ಸಮಾರಂಭ ಉದ್ಘಾಟಿಸಿ ನೆರೆದ ಅಪಾರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಬದುಕಿನಲ್ಲಿ ಶಾಂತಿ ನೆಮ್ಮದಿ ಸದ್ಗತಿ ಹೊಂದಲು ಸದ್ಗುರುವಿನ ಕೃಪಾಶೀರ್ವಾದ ಬಹು ಮುಖ್ಯವಾಗಿದೆ ಆ ಮಾರ್ಗದಲ್ಲಿ ಶ್ರೀ ಸದ್ಗುರು ಸಿದ್ಧ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಭಕ್ತರಲ್ಲಿ ಭಕ್ತಿ ಭಾವನೆಗಳನ್ನು ಬೆಳೆಸಿ ಅವರನ್ನು ಮುಕ್ತಿ ಮಾರ್ಗದಡೆಗೆ ಕೊಂಡೊಯ್ಯುತ್ತಿರುವುದು ಇಂದು ಸೇರಿರುವ ಭಕ್ತ ಸಾಗರವೇ ಸಾಕ್ಷಿಯಾಗಿದೆ ಎಂದು ಹೇಳಿದರು.
ನಾನು ಒಬ್ಬ ಶಾಸಕನಾಗಿ ಇಲ್ಲಿಗೆ ಬಂದಿಲ್ಲ ಈ ಶ್ರೀಮಠದ ಸದ್ಭಕ್ತನಾಗಿ ಬಂದಿದ್ದೇನೆ ಎಂದು ಯುಗಾದಿಯ ಶುಭ ಸಂದರ್ಭದಲ್ಲಿ ನಮಗೂ ನಿಮಗೂ ಶ್ರೀಗಳವರ ಆಶೀರ್ವಾದ ಸದಾ ಇರಲಿ ಎಂದರು. ಇದಕ್ಕೂ ಪೂರ್ವದಲ್ಲಿ ಪರಮಪೂಜ್ಯ ಸದ್ಗುರುಗಳವರನ್ನು ಸನ್ಮಾನಿಸಿ ಗೌರವಿಸಿದರು.
ಸಮಾರಂಭದ ಸನ್ನಿಧಾನ ವಹಿಸಿದ್ದ ಡಾ.ಸಿದ್ದತೋಟೇಂದ್ರ ಶಿವಾಚಾರ್ಯರು ಮಾತನಾಡಿ, ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ನಮಗೆ ಯುಗಾದಿಯೇ ಹೊಸ ವರ್ಷವಾಗಿದೆ ಈ ದಿನದಂದು ಶುಭ ಕಾರ್ಯಗಳು ಮಾಡಲು ಯೋಗ್ಯವಾಗಿದೆ ನಮ್ಮ ಬದುಕಿನಲ್ಲಿ ಕಹಿಯಲ್ಲಾ ಕಳೆದು ಸಿಹಿಯಾದ ಜೀವನ ಸಾಗಿಸಲು ಶ್ರೀ ಕೋರಿಸಿದ್ದೇಶ್ವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಈ ಜೀವನ ಬೇವು ಬೆಲ್ಲ ಎಂದು ನುಡಿದರು.
ಶರಣ ಕುಮಾರ್ ಜಾಲಹಳ್ಳಿ ಪ್ರಾರ್ಥಿಸಿದರು, ಚಂದ್ರಶೇಖರ್ ಗೋಗಿ, ಸಾಹೇಬಣ್ಣ ಗೋಗಿ, ಅಂಬರೀಶ್ ಶಳ್ಳಿಗಿ ಮುಂತಾದವರಿಂದ ಸಂಗೀತ ನೆರವೇರಿತು. ಬಸವರಾಜ್ ಪೋಲಿಸ್ ಪಾಟೀಲ್ ಗಂವಾರ್, ಮಲ್ಲನಗೌಡ ಹರವಾಳ, ಶರಣಗೌಡ ವರ್ಚನಹಳ್ಳಿ, ಶಿವಕುಮಾರ್ ಕಡಕಲ್ ಮಠ, ಅಶೋಕ್ ಗೌಡ ಪಾಟೀಲ, ವಿಶ್ವನಾಥ್ ರೆಡ್ಡಿ ನಾಡಗೌಡ, ಪಂಚಾಕ್ಷರಿ ಹಿರೇಮಠ, ಶರಣಗೌಡ ದೇಸಾಯಿ, ಶರಣಗೌಡ ಕೆಲ್ಲೂರ್, ಗೋಪಾಲ್ ರಾಠೋಡ್ ಚಿತ್ತಾಪುರ, ಅಭಿಮಾನಿ ಉಳ್ಳಂದಿಗೇರಿ, ಶಿವರೆಡ್ಡಿ ಕುಲಕುಂದಿ, ಮಹದೇವ್ ಗಂವಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.