ರಾಜೋಳ್ಳಾ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ, ಸರ್ವ ಜನಾಂಗದವರ ಏಳಿಗೆ ಬಯಸಿದ ಅಂಬೇಡ್ಕರ್ ಮಹಾನ್ ನಾಯಕ: ಸಂಜಯ ಬುಳಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಾಬಾಸಾಹೇಬರನ್ನು ಕೇವಲ ಒಂದು ಜಾತಿ ವರ್ಗಕ್ಕೆ ಸೀಮಿತ ಮಾಡಬೇಡಿ, ಅವರು ಸರ್ವ ಜನಾಂಗದವರ ಏಳಿಗೆ ಬಯಸಿದ ಮಹಾನ್ ನಾಯಕರಾಗಿದ್ದಾರೆ ಎಂದು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್ ಬುಳಕರ್ ಹೇಳಿದರು.
ತಾಲೂಕಿನ ರಾಜೋಳ್ಳಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ ಅವರ 134ನೇಯ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂವಿಧಾನ ಪೀಠಿಕೆ ಪಠಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಕೇವಲ ಒಂದು ಜಾತಿ ಅಥವಾ ಒಂದು ಸಮಾಜಕ್ಕಾಗಿ ಕೆಲಸ ಮಾಡಿಲ್ಲ. ಸರ್ವ-ಸಮಾಜದ ಕಟ್ಟ ಕಡೆಯ ವ್ಯಕ್ತಿಗೋಸ್ಕರ ಕೆಲಸ ಮಾಡಿದ್ದಾರೆ. ಸಂಶಯವಿದ್ದರೆ ಸಂವಿಧಾನ ಓದಿಕೊಳ್ಳಿ ಎಂದು ಹೇಳಿದರು.
ಡಾ. ಬಾಬಾಸಾಹೇಬರು ತಮ್ಮ ಬಾಲ್ಯದ ಜೀವನದಲ್ಲಿ ಬಹಳಷ್ಟು ಜಾತೀಯತೆಯ ಶೋಷಣೆ ಒಳಗಾದವರು. ಸಮಾಜದಲ್ಲಿ ಅವರನ್ನು ಕೆಳ ಜಾತಿಯವರು ಅನ್ನುವ ಕಾರಣಕ್ಕೆ ಸರಿಯಾಗಿ ಶಿಕ್ಷಣ ಪಡೆಯಲು ನೋವು ಕೊಟ್ಟು ಅವಮಾನಿಸಿದರೂ ಛಲಬಿಡದ ಬಾಬಾಸಾಹೇಬರು ಉನ್ನತ ಶಿಕ್ಷಣ ಪಡೆದು ಜಗತ್ತಿನಲ್ಲೆ ಅತೀ ದೊಡ್ಡ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿದ್ದಾರೆ ಎಂದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿ ಮಾತನಾಡಿ, ಸಂವಿಧಾನ ರಕ್ಷತಿ ರಕ್ಷಿತಃ ಎಂಬ ಮಾತಿನಂತೆ ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಹಾಗಾಗಿ ನಾವೆಲ್ಲರೂ ಜೊತೆಗೂಡಿ ಸಂವಿಧಾನ ರಕ್ಷಣೆಗೆ ನಿಲ್ಲಬೇಕಾಗಿ ಎಂದು ಹೇಳಿದರು.
ಡಿಎಸ್ಎಸ್ ತಾಲೂಕು ಸಂಚಾಲಕ ರವಿ ಬಡಿಗೇರ್ ವಾಡಿ, ಮಲ್ಲಿಕಾರ್ಜುನ ಹೊನ್ನಪುರ, ರಮೇಶ ದಿಮಾಕ್ ಅವರು ಮಾತನಾಡಿದರು.
ಈ ಸಂಧರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ್ ಚೂರಿ, ಭೀಮರಾಯ ಜುನ್ನ, ಶಂಕರ ಕೆಲಬಾ, ಶರಣಪ್ಪ ಪೂಜಾರಿ, ಕಾಶಪ್ಪ ಡೋಣಗಾಂವ, ಶಿವಶರಣಪ್ಪ ಮೆಂಗಾ, ಅಶೋಕ್ ಬಾನರ್, ಭೀಮು ಸಾಲಿ, ದೇವು ಮೆಂಗಾ, ಕರಿಯಪ್ಪ ದೊಡ್ಡಮನಿ, ದೇವಿಂದ್ರಪ್ಪ ಭೋಜನಿ, ಸಣ್ಣಗಪ್ಪ ಚೂರಿ, ಮಾರುತಿ ಚೂರಿ, ಬಸವರಾಜ್ ಬೋಚಿನ್ನಿ, ಸಾಬಣ್ಣ ಚೂರಿ, ಶರಣಪ್ಪ ಬೋಚಿನ್, ಜಯಂತ್ಯೋತ್ಸವ ಸಮಿತಿಯ ಸದಸ್ಯರು ಸೇರಿದಂತೆ ಇತರರಿದ್ದರು. ನಾಗರಾಜ್ ಓಂಕಾರ್ ನಿರೂಪಿಸಿ ವಂದಿಸಿದರು.