ಮಾದಿಗ ಸಮಾಜದ ಪದಾಧಿಕಾರಿಗಳ ಆಯ್ಕೆ, ಸಮಾಜ ಅಭಿವೃದ್ಧಿಗೆ ಸಂಘಟನೆ ಅಗತ್ಯ: ಕೋರೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ, ಹಾಗಾಗಿ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅಗತ್ಯವಾಗಿದೆ ಎಂದು ಮಾದಿಗ ಸಮಾಜದ ಯುವ ಮುಖಂಡ ಕಿರಣ ಕೋರೆ ಹೇಳಿದರು
ನಗರದ ಜಗದಂಭಾ ಮಂದಿರದ ಆವರಣದಲ್ಲಿ ಶಹಾಬಾದ ತಾಲೂಕಿನ ಮಾದಿಗ ಸಮಾಜದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದೆ, ಈ ದಿಸೆಯಲ್ಲಿ ಮಾದಿಗ ಸಮಾಜದ ತಾಲೂಕು ಸಮಿತಿ ರಚಿಸಲಾಗಿದೆ, ಆದ್ದರಿಂದ ಪ್ರತಿಯೊಬ್ಬರೂ ಒಗ್ಗಟ್ಟಿನೊಂದಿಗೆ ಸಮುದಾಯದ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ತಾಲೂಕು ಮಾದಿಗ ಸಮಾಜದ ಪದಾಧಿಕಾರಿಗಳು :
ಅಧ್ಯಕ್ಷರಾಗಿ ವಿಕ್ರಮ ಮಾಲಗತ್ತಿ, ಗೌರವಾಧ್ಯಕ್ಷರಾಗಿ ಕಿರಣ ಕೋರೆ, ಕಾರ್ಯಧ್ಯಕ್ಷರಾಗಿ ಶರಣು ಪಗಲಾಪುರ, ಮನೋಹರ ಮೇತ್ರಿ, ನಾಗರಾಜ್ ಮುದ್ನಾಳ, ಬಸವರಾಜ ತುಮಕೂರ, ಪ್ರಧಾನ ಕಾರ್ಯದರ್ಶಿಯಾಗಿ ರವಿ ಬೆಳಮಗಿ, ಮಲ್ಲೇಶಿ ಸೈದಾಪುರ, ಶ್ರೀಧರ ಕೊಲ್ಲೂರ, ನಾರಾಯಣ ಕಂದಕೂರ, ಉಪಾಧ್ಯಕ್ಷರಾಗಿ ಅಮರ ಕೋರೆ, ಪ್ರಮೋದ್ ಮಲ್ಹಾರ, ಲಕ್ಷ್ಮಿಕಾಂತ ಬಳಿಚಕ್ರ, ಜಯರಾಮ ಭಂಡಾರಿ ಜೊತೆಗೆ 10 ಜನ ಸಹಕಾರ್ಯದರ್ಶಿಗಳು ಹಾಗೂ 10 ಜನ ಸಂಘಟನಾ ಕಾರ್ಯದರ್ಶಿಗಳಾಗಿ, ಖಜಾಂಚಿಯಾಗಿ ಸಂತೋಷ ಹುಲಿಯವರನ್ನ ಆಯ್ಕೆ ಮಾಡಲಾಗಿದೆ, ಕಾನೂನು ಸಲಹೆಗಾರರಾಗಿ ಶರಣಪ್ಪ ಭಂಡಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ, ಈ ಸಭೆಯಲ್ಲಿ ತಾಲೂಕಿನ ಮಾದಿಗ ಸಮಾಜದ ಭಾಂದವರು ನೂರಾರು ಸಂಖ್ಯೆಯಲ್ಲಿದ್ದರು.
ಶಹಾಬಾದ ವರದಿ- ನಾಗರಾಜ್ ದಂಡಾವತಿ.