ಯಾದಗಿರಿ ವಕೀಲರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ದೇವಿಂದ್ರಪ್ಪ ಯರಗೋಳ ಅವರಿಗೆ ಭಗೀರಥ ಸಮಾಜದಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ದೇವಿಂದ್ರಪ್ಪ ಯರಗೋಳ ಅವರಿಗೆ ನಗರದ ಜಿಲ್ಲಾ ಉಪ್ಪಾರ ಸಮಾಜದ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಭಗೀರಥ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಸಮಾಜದ ಪ್ರಧಾನ ಕಾರ್ಯದರ್ಶಿ ಸುಭಾಷ್ಚಂದ್ರ ಕೋಟ್ಗೇರಿ, ಹಿರಿಯ ಮುಖಂಡರಾದ ಲಕ್ಷ್ಮಣ ಸಾಹುಕಾರ್ ಖಾನಾಪುರ್, ಯಂಕಣ್ಣಗೌಡ ಪಾಟೀಲ ಹೆಬ್ಬಾಳ, ಕೃಷ್ಣ ಅಣಿಕೇರಿ ಹಾಗೂ ವಕೀಲರು, ರಾಘವೇಂದ್ರ ಐಕೂರ್ ಶಿಕ್ಷಕರು, ಸಿದ್ದಣ್ಣ ದುರ್ಗದ, ಮೌನೇಶ್ ಬಂಗಿ ಕೋಟಗೇರಾ ಶಿಕ್ಷಕರು, ಕಾಶಿರಾವ್ ಕ್ಷಿರಸಾಗರ, ಭೀಮಷಪ್ಪ ಕಣೆಕಲ್, ಯಂಕಪ್ಪ ಗೋಪಾಳಪುರ, ರಾಘವೇಂದ್ರ ಸಾಹುಕಾರ ಖಾನಾಪುರ, ಮಾರ್ಥಾಂಡಪ್ಪ ಕಟ್ಟಿಮನಿ, ರಾಘವೇಂದ್ರ ಕಟ್ಟಿಮನಿ, ಸತೀಶ ಕಟ್ಟಿಮನಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
