ಚಿತ್ತಾಪುರ: ಸತತ ಮಳೆಗೆ ಬೆಳೆ ಹಾನಿ, ಸಂಕಷ್ಟದಲ್ಲಿ ರೈತರು
ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲು ರೈತ ಸಂಘ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಸತತವಾಗಿ ಸುರಿದ ಹುಬ್ಬಿ ಮಳೆಯಿಂದ ಕಟಾವಿಗೆ ಬಂದಂತಹ ಹೆಸರು, ಉದ್ದು ಮೊಳಕೆ ಒಡೆದು ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ಉಂಟಾಗಿದೆ ಕೂಡಲೇ ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ್ ಮೇಟಿ ಬಣ ತಾಲೂಕು ಅಧ್ಯಕ್ಷ ಮೌನೇಶ್ ಎಸ್. ಭಂಕಲಗಿ ಆಗ್ರಹಿಸಿದ್ದಾರೆ.
ರೈತ ಕಣ್ಣೀರಿನಲ್ಲಿ ಮುಳುಗಿದ ಆದರೆ ಕಲಬುರ್ಗಿ ಜಿಲ್ಲೆಯ ರೈತರ ವಾಣಿಜ್ಯ ಬೆಳೆಯಾದ ತೊಗರಿ ಬೆಳೆ ಹೆಚ್ಚಾಗಿ ಬಿತ್ತನೆ ಮಾಡುವುದರಿಂದ ತೊಗರಿ ಬೆಳೆಯ ಮೇಲೆ ಬಹಳ ಆಸೆ ಇತ್ತು ಉತ್ತಮ ರೀತಿಯಲ್ಲಿ ಇರುವುದರಿಂದ ತೊಗರಿ ರಾಶಿ ಮಾಡಿ ಸಾಲ ಸುಲ ತೀರಿಸುವ ಚಿಂತನೆ ಎಲ್ಲಿದ್ದ ರೈತ ಆದರೆ ಕೆಲವು ದಿನಗಳಿಂದ ಎಡಬಿಡದೆ ಸತತವಾಗಿ ಸುರಿಯುತ್ತಿರುವ ಅಸ್ತಿ ಮಳೆ ಮತ್ತು ಚಿತ್ತಿ ಮಳೆಯಿಂದ ತೊಗರಿ ಬೆಳೆ ಸಂಪೂರ್ಣ ನಾಶವಾಗಿ ರೈತ ತುಂಬಾ ಸಂಕಷ್ಟ ಪಡುತ್ತಿದ್ದಾನೆ, ಬಿತ್ತನೆಗಾಗಿ ಬೀಜ ಮತ್ತು ಗೊಬ್ಬರ ಕೀಟನಾಶಕ ಔಷಧಿ ಮಾಡಿದ ಸಾಲ ಯಾವ ರೀತಿ ತೀರಿಸಬೇಕು ಎಂದು ಚಿಂತಿಸುತ್ತ ಆತ್ಮಹತ್ಯೆ ಎಂಬ ಹಾದಿಯನ್ನು ರೈತ ನೋಡುವಂತಾಗುತ್ತದೆ. ಇಷ್ಟು ನಷ್ಟವಾದರೂ ಕೂಡ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಗಳು ಕೂಡ ಕನಿಷ್ಠ ಸೌಜನ್ಯಕ್ಕೂ ರೈತನ ಪರವಾಗಿ ಬೆಳೆ ಹಾನಿ ಸಮೀಕ್ಷೆ ಮಾಡದೆ ಬೇಜವಾಬ್ದಾರಿ ವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ರೈತರ ಸಂಕಷ್ಟ ದೂರ ಮಾಡುತ್ತಾರೆ ಎಂಬ ಆಶಾ ಭಾವನೆಗಳೊಂದಿಗೆ ನಾವೆಲ್ಲ ಸುಮ್ಮನಾಗಿದ್ದೆವು, ಆದರೆ ಬೆಳೆ ಪರಿಹಾರದ ಬಗ್ಗೆ ಸಚಿವರು ಎಲ್ಲಿ ಕೂಡ ಮಾತನಾಡುತ್ತಿಲ್ಲ ಎಂಬುದು ಬೇಸರದ ಸಂಗತಿ ತಮ್ಮ ಸರ್ಕಾರ ರೈತರ ಪರವಾಗಿದ್ದರೆ ಕೂಡಲೇ ಎಚ್ಚೆತ್ತುಕೊಂಡು ಬೆಳೆ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಒಂದು ವೇಳೆ ರೈತರ ಬೆಳೆಗೆ ಪರಿಹಾರ ಸಿಗದಿದ್ದಲ್ಲಿ ತಾಲೂಕಿನಾದ್ಯಂತ ಮತ್ತು ಜಿಲ್ಲೆಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕೆ ಪ್ರಕರಣ ಮೂಲಕ ಎಚ್ಚರಿಸಿದ್ದಾರೆ.