ಚಿತ್ತಾಪುರ ಪ್ರಜಾ ಸೌಧದ ಆವರಣದಲ್ಲಿ ನಾರಾಯಣ ಗುರು, ನೂಲಿಯ ಚಂದಯ್ಯ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ನೂಲಿಯ ಚಂದಯ್ಯ ರವರ ಜಯಂತಿಯನ್ನು ಆಚರಿಸಲಾಯಿತು.
ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣ ಗುರು ಹಾಗೂ ನೂಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಈಡಿಗ ಸಮಾಜದ ತಾಲೂಕು ಅದ್ಯಕ್ಷ ಶಂಕರಗೌಡ ರಾವೂರಕರ್, ಮುಖಂಡರಾದ ವಿನೋದ ಗುತ್ತೇದಾರ, ಶಾಮ್ ಮುಕ್ತೇದಾರ, ನರಸಯ್ಯ ಗೌಡ್, ದೇವಪ್ಪ ನಂದೂರಕರ್, ಹಣಮಯ್ಯ ಲಾಡ್ಲಾಪೂರ, ಸುರೇಶ್ ಗುತ್ತೇದಾರ, ಸಿದ್ದಯ್ಯ ಸೂಲಹಳ್ಳಿ, ನರಸಯ್ಯ ಕರದಾಳ, ರಾಜೇಶ ಗುತ್ತೇದಾರ ನಾಲವಾರ, ಪಂಕಜ ಗೌಡ್, ಅಂಬರೇಷ ಮರಗೋಳ, ಉಮೇಶ ಕುಕ್ಕುಂದಿ, ಅಂತಯ್ಯ ಮುಸ್ತಾಜರ್, ಮೋನಯ್ಯ ಮುಸ್ತಾಜರ್, ಯೋಗೇಶ ಗುತ್ತೇದಾರ, ಆನಂದ ಗುತ್ತೇದಾರ, ಕಾಶಿರಾಯ ಕಲಾಲ್, ದಸ್ತಯ್ಯ ಯರಗಲ್ ಹಾಜರಿದ್ದರು.
ನೂಲಿಯ ಚಂದಯ್ಯ ರವರ ಸಮಾಜದ ಮಾಜಿ ಅದ್ಯಕ್ಷ ಮಲ್ಲು ಮಾಸ್ಟರ್ ಹಲಕರ್ಟಿ, ಶಿವು ಭಜಂತ್ರಿ, ಸಮಾಜದ ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಂತಾ ಭಜಂತ್ರಿ, ಸಿದ್ರಾಮ ಭೈರಿ, ಮುರಗೇಂದ್ರ ಭಜಂತ್ರಿ ಅಲ್ಲೂರ, ಜಗದೀಶ ಜಾಧವ ವಾಡಿ, ಶಂಕರ ಭಜಂತ್ರಿ, ಸತೀಶ ಭಜಂತ್ರಿ, ರವಿಶಂಕರ ಭೈರಿ, ಸಾಬಣ್ಣ ಭಜಂತ್ರಿ, ರಾಜು ಭಜಂತ್ರಿ ಚಿತ್ತಾಪುರ ಹಾಜರಿದ್ದರು.
ಉಪ ಖಜಾನಾಧಿಕಾರಿ ಸೈಯದ್ ನಸೀರ್ ಹಶ್ಮಿ, ಉಪ ನೊಂಧಾಣಾಧಿಕಾರಿ ಆನಂದರಾವ್ ಕುಲಕರ್ಣಿ, ಸರ್ವೆ ಇಲಾಖೆಯ ಅಧಿಕಾರಿ ಪ್ರಸನ್ನ ದೇಶಪಾಂಡೆ, ಕಾರ್ಮಿಕ ನಿರೀಕ್ಷಕರು ಮತ್ತು ಇತರೆ ಅಧಿಕಾರಿಗಳು, ಹಾಗೂ ತಹಸೀಲ್ ಕಚೇರಿಯ ಶಿರಸ್ತೇದಾರರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

