Oplus_0

ಚಿತ್ತಾಪುರ: ಸಾವಿರ ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಹೊರವಲಯದ ನಾಗಾವಿ ದೇವಸ್ಥಾನದ ಹತ್ತಿರ ಕರ್ನಾಟಕ ಕೊಳಗೇರಿ ಮಂಡಳಿಯಡಿ ನಿರ್ಮಾಣವಾಗಿರುವ 1000 ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ ಫಲಾನುಭವಿಗೆ ಮನೆಗಳು ಶೀಘ್ರ ಹಂಚಿಕೆ ಮಾಡಬೇಕು ಎಂದು ಲಕ್ಷ್ಮೀಕಾಂತ ತಾಂಡೂರಕರ್ ನೇತೃತ್ವದಲ್ಲಿ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಕಳೆದ 2018 ರಲ್ಲಿ ತಾವು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ನಿರ್ಮಾಣವಾದ ಮನೆಗಳು ಸುಮಾರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ ಕಳೆದ ಮಾರ್ಚ್ 3 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊಳಗೇರಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬಯ್ಯ ಹಾಗೂ ಮಂಡಳಿಯ ಅಧಿಕಾರಿಗಳು ವಿಡಿಯೋ ಕಾನ್ಸರೆನ್ಸ್ ಮುಖಾಂತರ ಮನೆಗಳ ಉದ್ಘಾಟನೆ ಮಾಡಿದ್ದರು, ಆದರೆ 8 ತಿಂಗಳಾದರೂ ಮನೆ ಹಂಚಿಕೆ ಇನ್ನು ಆಗಿಲ್ಲ ಹಾಗೂ ಫಲಾನುಭವಿಗಳು ವಂತಿಕೆ ಹಣ ಸಹ ಪಾವತ್ತಿಸಿದ್ದಾರೆ ಎಂದು ಹೇಳಿದರು.

ನೀರು, ರಸ್ತೆ, ಚರಂಡಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಹಂಚಿಕೆ ಮಾಡಬೇಕು. ಕಟ್ಟಿದ ಮನೆಗಳು ಬಿರುಕು ಬಿಡುತ್ತಿವೆ ಕಿಟಕಿಗಳು ಒಡೆದಿವೆ ಬಾಗಿಲು ಮುರಿದಿವೆ ಅಲ್ಲದೇ ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಹೀಗಾಗಿ ಕೂಡಲೇ ಮನೆಗಳು ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮನೆ ಹಂಚಿಕೆ ಆಗುತ್ತೆ ಅಂತ ಹೇಳಲಾಗಿತ್ತು, ಆದರೂ ಕೂಡ ಮನೆ ಹಂಚಿಕೆ ಆಗಿರುವುದಿಲ್ಲ ತಮ್ಮ ಮೇಲೆ ಚಿತ್ತಾಪುರ ಮತಕ್ಷೇತದ ಜನ ವಿಶ್ವಾಸ ಇಟ್ಟಿದು ಬೆಟ್ಟದಷ್ಟು ಭರವಸೆ ಇದೆ ಬಡ ಜನರಿಗೆ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿ ಅವರ ಮುಖದಲ್ಲಿ ಮಂದಹಾಸ ಮೂಡಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಕಡೇಸೂರ, ನರಹರಿ ಕುಲಕರ್ಣಿ, ನಾಗಪ್ಪ ಪೂಜಾರಿ, ಸಾಗರ ಕರದಳ್ಳಿಕರ್, ಕೃಷ್ಣ ಭೋವಿ, ಸತೀಶ್ ಗೌಳಿ, ಭೀಮಣ್ಣ ಭಜಂತ್ರಿ, ತಿಮ್ಮಯ್ಯ ಭೋವಿ, ಬಸವರಾಜ ಮೈನಾಳಕರ್, ಅನೀಲ್ ಶರಣಪ್ಪ, ವಿಶ್ವನಾಥ ತಳವಾರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!