Oplus_0

ರಾಯಚೂರು ವಿಶ್ವವಿದ್ಯಾಲಯ ಕರಾಟೆ ತಂಡಕ್ಕೆ ಆಯ್ಕೆ

ನಾಗಾವಿ ಎಕ್ಸಪ್ರೆಸ್

ಶಹಾಪುರ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ 5 ನೇ ಸೆಮಿಸ್ಟರ್ ವಿದ್ಯಾರ್ಥಿ ಮೌನೇಶ ಬಸವರಾಜ ಹಾಗೂ ಬಿ.ಎ 3 ನೇ ಸೆಮಿಸ್ಟರ್ ವಿದ್ಯಾರ್ಥಿ ಮಲ್ಲಿಕಾರ್ಜುನ ಮಾರುತಿ ಇವರು ರಾಯಚೂರು ವಿಶ್ವವಿದ್ಯಾಲಯದ ಕರಾಟೆ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮಧ್ಯಪ್ರದೇಶದ ಎಲ್.ಎನ್.ಸಿ.ಟಿ ವಿಶ್ವವಿದ್ಯಾಲಯದಲ್ಲಿ ಜರುಗುವ ಕರಾಟೆ ಪಂದ್ಯಾವಳಿಯಲ್ಲಿ ರಾಯಚೂರು ವಿಶ್ವವಿದ್ಯಾಲಯ ತಂಡದಿಂದ ಸ್ಪರ್ಧಿಸಲಿದ್ದಾರೆ. ಈ ವಿಧ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಸ್ ರಾಂಪೂರೆ, ಕ್ರೀಡಾ ಸಂಚಾಲಕ ಡಾ.ಎಮ್.ಎನ್ ಸೌದಾಗರ್ ಮತ್ತು ದೈಹಿಕ ಶಿಕ್ಷಣ ನಿರ್ಧೇಶಕ ಡಾ. ಪ್ರದೀಪಕುಮಾರ ಎಮ್. ಪಾಟೀಲ್ ಮತ್ತು ಕಾಲೇಜಿನ ಎಲ್ಲಾ ಭೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!