ಮುಂಗಾರು ಬೆಳೆಗಳಲ್ಲಿ ಬಸವನ ಹುಳು ನಿರ್ವಹಣೆ ಕ್ರಮಗಳು ಅನುಸರಿಸಿ: ಸಂಜೀವಕುಮಾರ ಮಾನಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮುಂಗಾರು ಹಂಗಾಮು ಪ್ರಾರಂಭದಲ್ಲಿ ಬಿತ್ತಿದ ಸೋಯಾ, ಉದ್ದು, ಹೆಸರು, ಮತ್ತು ತೊಗರಿ ಬೆಳೆಗಳು 2-4 ಎಲೆಯ ಹಂತದಲ್ಲಿದ್ದಾಗ (ಸಮಾರು 10-20 ದಿವಸದ ಬೆಳೆಗಳಿರುವಾಗ) ರೈತರ ಹೊಲಗಳಲ್ಲಿ ಬಸವನ ಹುಳು, (ಶಂಕದ ಹುಳು) ವಿನ ಬಾಧೆ ಕಂಡು ಬರುವ ಸಾದ್ಯತೆ ಇರುತ್ತದೆ. ಹೀಗಾಗಿ ನಿರ್ವಹಣ ಕ್ರಮಗಳು ಅನುಸರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್ ತಿಳಿಸಿದ್ದಾರೆ.
ಬಸವನ (ಶಂಕದ ಹುಳು) ಹುಳುವಿನ ಬಾಧೆಯ ಲಕ್ಷಣಗಳು:
ಈ ಹುಳುಗಳು ಬೆಳೆಯುತ್ತಿರುವ ಗಿಡದ ಪ್ರಥಮ 2 ರಿಂದ 4 ಎಲೆಗಳ ತುದಿ ಚಿಗುರು, ದೇಟುಗಳು ಹಾಗೂ ಕಾಂಡಗಳನ್ನು ಕೆರೆದು ತಿನ್ನುವುದು ಪೀಡೆ ಬಾಧಿತ ನಾಟಿಗೆಗಳು ಸರಿಯಾಗಿ ಬೆಳೆಯದೆ ನಸಿಕಿ ಹೋಗುತ್ತವೆ ಮತ್ತು ಮುಂದುವರೆದು ಈ ಪೀಡೆಯ ಬಾಧೆ ಜಾಸ್ತಿಯಾದಲ್ಲಿ ಅಂತಃ ಬಾಧಿತ ಹೊಲಗಳ ರೈತರು ಮತ್ತೊಮ್ಮೆ ಬಿತ್ತನೆ ಕಾರ್ಯ ಕೈಗೊಳ್ಳಬೇಕಾಗಬಹುದು.
ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶವಿರುವಾಗ ಹಗಲಿನಲ್ಲಿಯೂ ಇವುಗಳ ಬಾಧೆ ಕಾಣಬಹುದು. ಸಾಮಾನ್ಯವಾಗಿ ಸಾಯಂಕಾಲದಿಂದ ಬೆಳಗಿನ ಜಾವದವರೆಗೂ ತಿಂದು ಪುನಃ ಬೆಳೆಗಾದ ಕೂಡಲೇ ಆಡಗು ತಾಣಗಳಲ್ಲಿ ಸೇರಿಕೊಳ್ಳುತ್ತವೆ.
ಬಸವನ (ಶಂಕದ ಹುಳು) ಹುಳುವಿನ ನಿರ್ವಹಣೆ:
• ಪೀಡೆಗೆ ಅಸರೆಯಾಗುವ ಅಡಗು ತಾಣಗಳಾದ ಹುಲ್ಲು, ಬಿದ್ದ ಕಸಕಡ್ಡಿ ಮುಂತಾದವುಗಳನ್ನು ಪ್ರಾರಂಭದಲ್ಲಿ ತೆಗೆದು ಸ್ವಚ್ಚವಾಗಿಡಿ.
• ಯಾವಾಗ ಶಂಕದ ಹುಳುವಿನ ಅರ್ಭಟ ಜಾಸ್ತಿಯಾಗಲಿಕ್ಕೆ ಪ್ರಾರಂಭಿಸುವುದು ಆಗ ಹೊಲದಲ್ಲಿ ಅಲ್ಲಲ್ಲಿ ಕೃಷಿ ತ್ಯಾಜ್ಯಗಳ ಗುಂಪಿ ಹಾಕುವುದರಿಂದ ಹುಳುಗಳು ಆಸರೆಗಾಗಿ ಆಡಗಿ ಕೂಡುತ್ತವೆ ಪ್ರತಿ ದಿನ ಮುಂಜಾನೆ ಆರಿಸಿ ಸಾಬೂನಿನ ನೀರಲ್ಲಿ ಬಕೆಟಿಗೆ ಹಾಕಿ ಮೇಲೆ ಉಪ್ಪು ಹಾಕುವುದರಿಂದ ನಾಶಪಡಿಸಬಹುದು.
• ಹೊಲದ ನಡೆದಾಡುವ ಕಡೆ ಅಥವಾ ಗಿಡಗುಂಟದಲ್ಲಿ ಹರಳು ಉಪ್ಪನ್ನು ಸುರಿಯಿರಿ. ಸಾಯಂಕಾಲ ಅಥವಾ ಮುಂಜಾನೆ ಸಮಯದಲ್ಲಿ ಕೈಯಿಂದ ಆರಿಸಿ ಗೋಣಿ ಚೀಲದಲ್ಲಿ ಕಲೆಹಾಕಿದ ಬಸವನ ಹುಳುಗಳನ್ನು ಬಕೆಟಿಗೆ ಹಾಕಿದ ಮೇಲೆ ಉಪ್ಪು ಹಾಕುವುದರಿಂದ ನಾಶಪಡಿಸಬಹುದು.
• ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನಸಿದ ಗೋಣಿಚೀಲ ಹರಡಿ ಅಥವಾ ಕೊಳೆತ ಕಸ ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳ ಮೇಲೆ ಬೀಚಿಂಗ್ ಪುಡಿ 8-10 ಕಿ.ಗ್ರಾಂ ಪ್ರತಿ ಎಕರೆಗೆ ಧೂಳೀಕರಿಸಿ ನಾಶಪಡಿಸಬಹುದು ಅಥವಾ ಮೇಲೆ ಹೇಳಿದ (2) ಪದ್ಧತಿ ಅನುಸರಿಸಿ ನಾಶಪಡಿಸಬಹುದು.
• ಮೆಟಾಲ್ಡಿಹೈಡ್ ಮಾತ್ರೆಗಳನ್ನು ಎಕರೆಗೆ 2 ಕಿ.ಗ್ರಾಂ ನಂತೆ ಹೊಲದಲ್ಲಿ ಎರೆಚಿದರೆ ಇವುಗಳಿಗೆ ಆಕರ್ಷಿಸಿತವಾಗಿ ಸಾಯುತ್ತವೆ.
• ವಿಷ ಪಾಶಾಣ: ಅಕ್ಕಿ ಅಥವಾ ಗೋಧಿತೌಡು 10 ಕಿಲೋ, 5 ಕಿಲೋ ಬೆಲ್ಲ ಮತ್ತು ತಕ್ಕ ಮಟ್ಟಿಗೆ ನೀರನ್ನು (6-7 5ಲೀ) ಬೆರೆಸಿ 36 ಗಂಟೆ (ಎರಡು ಹಗಲು ಒಂದು ರಾತ್ರಿ) ಮುಚ್ಚಿ ಇಡಬೇಕು. ಮಾರನೇ ದಿನ ಸಂಜೆ ಕಾರ್ಯಾರಿಲ್ 50 ಎಸ್.ಪಿ (400 ಗ್ರಾಂ.) ಕೀಟನಾಶಕವನ್ನು ಮಾಡಿ ಸಾಯಂಕಾಲ ಸಂಜೆ 5 ಗಂಟೆಯ ನಂತರ ಹೊಲದ ಸುತ್ತ ಅಂಚಿನಲ್ಲಿ ಮತ್ತು ಸಾಲುಗಳಲ್ಲಿ ಹರಡಿ ಹುಳುಗಳನ್ನು ನಾಶ ಪಡಿಸುವುದು.
• ವಿಷ ಪಾಶಾಣ 10 ಸೆರು ಮಂಡಾಳ + (1.ಕೆ.ಜಿ ಬೆಲ್ಲ + 1ಲೀ ನೀರು) ನೆನೆಸಿ + 50 ಮಿಲಿ ಗೌಚೊ) ಸಾಯಂಕಾಲ ಎರಚಬೇಕು.
ಸತ್ತ ಹುಳುಗಳನ್ನು ಮರುದಿನವೇ ಆರಿಸಿ 3 ಅಡಿ ಆಳದ ಗುಂಡಿಯಲ್ಲಿ ಹೂಳಬೇಕು ಈ ರೀತಿ ಮಾಡುವುದರಿಂದ ಸತ್ತ ಹುಳುವಿನ ಹೊಟ್ಟೆಯಲ್ಲಿರುವ ಮೊಟ್ಟೆಗಳನ್ನು ನಾಶ ಮಾಡಿದಂತಾಗುತ್ತದೆ ಮತ್ತು ಬೆಕ್ಕು, ನಾಯಿ, ಪಕ್ಷಿ ಮತ್ತು ಇತರೆ ಪರಭಕ್ಷಕಗಳು ಪಾಷಾಣ ಯುಕ್ತ ಸತ್ತ ಹುಳುಗಳನ್ನು ತಿಂದು ನಾಶವಾಗದಂತೆ ಕಾಪಾಡಬಹುದು. ಕಾಯಾರಿಲ್ ವಿಷ ಪಾಷಾಣವನ್ನು ಬಳಸಿದ ಯಾವುದೇ ಬೆಳೆಗಳಲ್ಲಿ ನೀರನ್ನು ಚೆಲ್ಲಿ, ಆಯಿಸಿ ನಿಷ್ಕ್ರಿಯಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.