Oplus_131072

ದಿ.25 ರಂದು ಬಿರಾಳ.ಕೆ ಶ್ರೀ ಕೋರಿಸಿದ್ದೇಶ್ವರ ರಥೋತ್ಸವ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಸುಕ್ಷೇತ್ರ ಬಿರಾಳ.ಕೆ ಇದೇ ಮಾ.25 ರಂದು ಗ್ರಾಮದ ಆರಾಧ್ಯ ದೈವ ವಾದ ಶ್ರೀ ಕ್ಷೇತ್ರ ನಾಲವಾರ ಪುರಾದೀಶ್ವರ ಶ್ರೀ ಕೋರಿಸಿದ್ದೇಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಪೀಠಾಧಿಪತಿಗಳಾದ ಪೂಜ್ಯ ಡಾ. ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸನ್ನಿಧಿಯಲ್ಲಿ ಸಡಗರ ಸಂಭ್ರಮದ ಮಧ್ಯೆ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.

ಬಿರಾಳ.ಕೆ ನಾಲವಾರ ಶಾಖಾ ಮಠದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಪೂಜ್ಯಶ್ರೀಗಳವರ ದಿವ್ಯ ಸನ್ನಿಧಿಯಲ್ಲಿ ಸಂಜೆ 6 ಗಂಟೆಗೆ ಶ್ರೀ ಕೋರಿಸಿದ್ದೇಶ್ವರ ಭವ್ಯ ರಥೋತ್ಸವ ಸಡಗರ ಸಂಭ್ರಮದ ಮಧ್ಯೆ ನಡೆಯಲಿದೆ ಈ ಸಂದರ್ಭದಲ್ಲಿ ವಿಶೇಷ ಮದ್ದು ಸುಡುವುದು, ವೀರಗಾಸೆ ಸೇವೆ, ಭಜನಾ ಸೇವೆ ನಡೆಯಲಿದೆ. ಸಹಸ್ರ ಸಹಸ್ರ ಭಕ್ತರು ಭಕ್ತಿ ಭಾವಗಳಿಂದ ಭಾಗವಹಿಸುವರು ನಂತರ ನಡೆಯುವ ಜಾತ್ರಾ ಮಹೋತ್ಸವ ಸಮಾರಂಭದ ದಿವ್ಯ ಸನ್ನಿಧಾನವನ್ನು ಪೂಜ್ಯಶ್ರೀಗಳವರು ವಹಿಸುವರು.

ಈ ಕಾರ್ಯಕ್ರಮದಲ್ಲಿ ನಾಡಿನ ಹರ ಗುರು ಚರಮೂರ್ತಿಗಳು, ಸಾಹಿತಿಗಳು, ಕವಿ ಕಲಾವಿದರು ಭಾಗವಹಿಸುವರು. ಜಾತ್ರಾ ಮಹೋತ್ಸವದ ಅಂಗವಾಗಿ ಪಂ.ವೀರೇಶ್ವರ ಶಾಸ್ತ್ರಿಗಳು ಮಲ್ಕೂರ್ ಅವರಿಂದ ಕಳೆದ ಒಂದು ವಾರದಿಂದ ಸಾಗಿ ಕೊಂಡು ಬಂದಿರುವಂತಹ ಶ್ರೀ ಗುಡ್ಡಾಪುರದ ದಾನಮ್ಮ ದೇವಿಯವರ ಪುರಾಣ ಮಹಾಮಂಗಳೋತ್ಸವ ಸೇವೆಗೈದ ಭಕ್ತರಿಗೆ ಗುರು ರಕ್ಷೆ ಸಂಗೀತ ಪ್ರವಚನ ಭಜನೆ ನಡೆಯಲಿದೆ ನಂತರ ಮಹಾಪ್ರಸಾದ ವಿತರಣೆ ನೆರವೇರುವುದು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!