ಚಿತ್ತಾಪುರದಲ್ಲಿ ಭಾರತೀಯ ಭೌದ್ಧ ಮಹಾಸಭಾ ವತಿಯಿಂದ ಸಮವಸ್ತ್ರದೊಂದಿಗೆ ಭೀಮ ಪಥಸಂಚಲನ ನಡೆಸಲು ಅನುಮತಿ: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಡಿಸೆಂಬರ 1 ರಂದು (ಇಂದು) ನಡೆಯುವ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಭೀಮನಡಿಗೆ ಪಥಸಂಚಲನ ಹಾಗೂ ಸಂವಿಧಾನ ಸಮಾವೇಶದ ನಿಮಿತ್ತ ಅರ್ಜಿದಾರ ಮಲ್ಲಿಕಾರ್ಜುನ ಬೆಣ್ಣೂರಕರ ಮುಖಂಡರು, ಸಂವಿಧಾನ ಸಂರಕ್ಷಣ ಸಮಿತಿ ಮನವಿಯಂತೆ ಅರಕ್ಷಕ ವೃತ್ತ ನಿರೀಕ್ಷರು, ಚಿತ್ತಾಪುರ ರವರ ವರದಿಯಂತೆ, ಭಾರತೀಯ ಭೌದ್ಧ ಮಹಾಸಭಾ ಉತ್ತರ ಕರ್ನಾಟಕ ಶಾಖೆ ವತಿಯಿಂದ ಸಮವಸ್ತ್ರದೊಂದಿಗೆ ಭೀಮ ಪಥಸಂಚಲನ ನಡೆಸಲು ಹಾಗೂ ಚಿತ್ತಾಪುರ ಕಂದಾಯ ತಾಲೂಕಿನ ಜನರ ಜೊತೆ ಬೇರೆ ಜಿಲ್ಲೆಯ ಸಂವಿಧಾನದ ಬಗ್ಗೆ ಅಭಿಮಾನವುಳ್ಳವರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಿ ಆದೇಶಿಸಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

