ಚಿತ್ತಾಪುರ ಕಾಶಿ ಗಲ್ಲಿಯಲ್ಲಿ ಐಪಿಎಲ್ ವೀಕ್ಷಣೆಗೆ ಆರ್’ಸಿಬಿ ಕಾಶಿ ಬಳಗದ ವತಿಯಿಂದ ದೊಡ್ಡ ಸ್ಕ್ರೀನ್ ವ್ಯವಸ್ಥೆ, ವೀಕ್ಷಿಸಲು ಮುಗಿಬಿದ್ದ ಯುವಕರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಹಮದಾಬಾದ್, ನ ಶ್ರೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುತ್ತಿರುವ 18 ನೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ವೀಕ್ಷಣೆಗಾಗಿ ಪಟ್ಟಣದ ಕಾಶಿ ಗಲ್ಲಿಯಲ್ಲಿ ಆರ್’ಸಿಬಿ ಕಾಶಿ ಬಳಗದ ವತಿಯಿಂದ ದೊಡ್ಡ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.
ಬಹಿರಂಗವಾಗಿ ಸ್ಕ್ರೀನ್ ವ್ಯವಸ್ಥೆ ಮಾಡಿದ್ದರಿಂದ ಕಾಶಿ ಗಲ್ಲಿ ಸೇರಿದಂತೆ ಸುತ್ತಲಿನ ಯುವಕರು, ಮುಖಂಡರು ಹಾಗೂ ಮಹಿಳೆಯರು ಸೇರಿದಂತೆ ಚಿಕ್ಕ ಮಕ್ಕಳು ಉತ್ಸಾಹದಿಂದ ವೀಕ್ಷಿಸುವುದರೊಂದಿಗೆ ಆರ್’ಸಿಗೆ ಜಯವಾಗಲಿ ಈ ಬಾರಿ ಕಪ್ ನಮ್ಮದೆ, ವೀರಾಟ್ ಕೊಯಿಲಿ ಗೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಕಾಶಿ ವಡ್ಡರ ಸಮಾಜದ ಗೌರವಾಧ್ಯಕ್ಷ ಸಾಯಬಣ್ಣ ವೈ.ಕಾಶಿ, ಅಧ್ಯಕ್ಷ ರಾಜೇಶ್ ಕಾಶಿ, ಪ್ರದಾನ ಕಾರ್ಯದರ್ಶಿ ಬಾಬು ಕಾಶಿ, ಸರಪಂಚ್ ವಿಠಲ್ ಕಟ್ಟಿಮನಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸಾಬಣ್ಣ ಸಿ.ಕಾಶಿ, ಸಂಜಯ ಕಾಶಿ, ಶರಣು ಕೆ.ಕಾಶಿ, ಜಗನ್ ಕಾಶಿ, ಸಂತೋಷ ಕಾಶಿ, ವಿಜಯಕುಮಾರ್ ಕಾಶಿ, ವಿನಾಯಕ ಕಾಶಿ, ರೇವಣು ಕಾಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಹಿರಿಯ ಕ್ರೀಡಾಪಟು ಬಾಬು ಕಾಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ್ದು, ಫೈನಲ್ ಪಂದ್ಯದಲ್ಲಿಯೂ ಸಹ ಭರ್ಜರಿಯಾಗಿ ಆಟವಾಡುವ ಮೂಲಕ ಗೆಲುವು ಸಾಧಿಸಿ ಕನ್ನಡಿಗರ ಕನಸು ನನಸು ಮಾಡಲಿದೆ ಎಂದು ಸರಪಂಚ್ ವಿಠಲ್ ಕಟ್ಟಿಮನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.