ಚಿತ್ತಾಪುರದಲ್ಲಿ ಮೋಕ್ಷದ ರಾಣಿ ಅದ್ದೂರಿ ಮೆರವಣಿಗೆ | ಗುರು ಫಾ. ವಿನ್ಸೆಂಟ್ ಪೆರೇರಾ ನೇತೃತ್ವದಲ್ಲಿ ಹಬ್ಬದ ಕಾರ್ಯಕ್ರಮಗಳು ಯಶಸ್ವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸ್ವರ್ಗೀಯ ಚರ್ಚ್ ರಾಣಿ ಮೋಕ್ಷದ ರಾಣಿಯ ಅದ್ದೂರಿ ಮೆರವಣಿಗೆ ಪ್ರಾರಂಭವಾಗಿ ಹೋಳಿಕಟ್ಟ, ಚಿತ್ತಾವಲಿ ಚೌಕ್, ಕಪಡಾ ಬಜಾರ್, ಜನತಾ ಚೌಕ್, ಭುವನೇಶ್ವರಿ ಚೌಕದಿಂದ ಮೋಕ್ಷದ ರಾಣಿ ದೇವಾಲಯಕ್ಕೆ ತಲುಪಿತು.
ಮೋಕ್ಷದ ರಾಣಿ ದೇವಾಲಯದ ಹಬ್ಬವನ್ನು ಭಕ್ತಿಯಿಂದ ಹಾಗೂ ಆನಂದದಿಂದ ಭವ್ಯವಾಗಿ ಆಚರಿಸಲಾಯಿತು. ಈ ದೇವಾಲಯದ ಗುರು ಫಾ. ವಿನ್ಸೆಂಟ್ ಪೆರೇರಾ ಅವರ ನೇತೃತ್ವದಲ್ಲಿ ಹಬ್ಬದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. ಭಕ್ತರು ದೇವಾಲಯಕ್ಕೆ ಆಗಮಿಸಿ ಆರಾಧನೆ, ಪಾಪನಿವೇದನೆ, ಪವಿತ್ರ ಬಲಿ ಪೂಜೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಹಬ್ಬದ ಸಂದರ್ಭದಲ್ಲಿ ಫಾ. ಸ್ಟೀವನ್ ವೇಗಾಸ್ ಅವರು ಬಲಿಪೂಜೆಯನ್ನು ಅರ್ಪಿಸಿದರು ಮತ್ತು ಫಾ. ಜೋಸೆಫ್ ಪ್ರವೀಣ್ ಅವರು ದೇವರ ವಾಕ್ಯವನ್ನು ಸಾರಿದರು. ಯಾದಗಿರಿ, ಕಲಬುರಗಿ, ವಾಡಿ, ಆಳಂದ್, ಸೇಡಂ ಹಾಗೂ ಇತರ ಹಲವು ಸ್ಥಳಗಳಿಂದ ಬಂದ ಫಾದರ್ಗಳು ಈ ಹಬ್ಬದಲ್ಲಿ ಪಾಲ್ಗೊಂಡರು.
ಹಬ್ಬದ ಪ್ರಮುಖ ಆಕರ್ಷಣೆಯಾಗಿ 15 ಗುರುಗಳು ಸೇರಿ ಪವಿತ್ರ ಬಲಿ ಪೂಜೆ ನೆರವೇರಿಸಿದರು. ವಿವಿಧ ಧಾರ್ಮಿಕ ಸಹೋದರಿಯರೂ ಹಬ್ಬದಲ್ಲಿ ಪಾಲ್ಗೊಂಡು ಭಕ್ತಿಭಾವವನ್ನು ಹೆಚ್ಚಿಸಿದರು. ಹಬ್ಬವನ್ನು ಯಶಸ್ವಿಯಾಗಿ ನಡೆಸಲು ಪಾಲನಾ ಪರಿಷತ್ ಸದಸ್ಯರು ಹಾಗೂ ಯುವಕರು ಮಹತ್ವದ ಸಹಾಯ ಮಾಡಿದರು, ಎಲ್ಲ ಕ್ಷೇತ್ರಗಳಲ್ಲಿ ತೊಡಗಿಕೊಂಡು ಹಬ್ಬಕ್ಕೆ ಭವ್ಯತೆಯನ್ನು ನೀಡಿದರು. ಸಂಜೆ ಭಕ್ತಿಪೂರ್ಣವಾಗಿ ಮೆರವಣಿಗೆ ನಡೆಯಿತು, ಇದರಲ್ಲಿ ಸ್ತೋತ್ರ ಗೀತೆಗಳು, ಪ್ರಾರ್ಥನೆಗಳು ಹಾಗೂ ಧಾರ್ಮಿಕ ಭಾವನೆ ತುಂಬಿದ ಕಾರ್ಯಕ್ರಮಗಳು ನಡೆದವು. ಈ ಹಬ್ಬವು ಜನರಿಗೆ ಐಕ್ಯತೆ, ಭಕ್ತಿಭಾವ ಮತ್ತು ದೇವರ ಕೃಪೆಯನ್ನು ಮತ್ತಷ್ಟು ಗಾಢಗೊಳಿಸಿದ ಸಂದರ್ಭವಾಯಿತು.
ಪ್ಯಾರಿಷ್ ಪಾಸ್ಟೋರಲ್ ಕೌನ್ಸಿಲ್, ಬೆಥನಿ ಸಿಸ್ಟರ್ಸ್ ಮತ್ತು ಪ್ಯಾರಿಷ್ ಪಾದ್ರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

