ದಸರಾ ಕ್ರೀಡಾಕೂಟದಲ್ಲಿ ಚಿತ್ತಾಪುರ ಕಬ್ಬಡ್ಡಿ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರ್ಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿತ್ತಾಪುರ ಕಬ್ಬಡ್ಡಿ ತಂಡ ಸತತವಾಗಿ ಮೂರನೇ ಬಾರಿಗೆ ಜಯ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ತರಬೇತುದಾರ ಮರೇಪ್ಪ ಬೊಮ್ಮನಳ್ಳಿಕರ್ ತಿಳಿಸಿದ್ದಾರೆ.
ಕ್ರೀಡಾಪಟುಗಳಾದ ಶರಣು, ಭರತ್, ಮೌನೇಶ್, ಹಾಲಪ್ಪ, ಬಸವರಾಜ, ಆನಂದ, ರಾಜು, ದುರಾಜ್, ವಿಜಯ, ಭೀಮು, ಸದಾಶಿವ ಸೇರಿದಂತೆ ಇತರರು ಇದ್ದರು.