ಗುಂಡಗುರ್ತಿ ಪಿಕೆಪಿಎಸ್ಗೆ ಅಧ್ಯಕ್ಷರಾಗಿ ಸುನೀಲ್ ದೊಡ್ಡಮನಿ, ಉಪಾಧ್ಯಕ್ಷರಾಗಿ ಗುರುನಾಥ ದೇಸಾಯಿ ಅವಿರೋಧ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಗುಂಡಗುರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಅಧ್ಯಕ್ಷರಾಗಿ ಸುನೀಲ್ ದೊಡ್ಡಮನಿ ಹಾಗೂ ಉಪಾಧ್ಯಕ್ಷರಾಗಿ ಗುರುನಾಥ ದೇಸಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುನೀಲ್ ದೊಡ್ಡಮನಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುನಾಥ ದೇಸಾಯಿ ಮತ್ತು ಬಸವರಾಜ ಮೈಲಾರಿ ನಾಮಪತ್ರ ಸಲ್ಲಿಸಿದ್ದರು. ಕೊನೇ ಕ್ಷಣದಲ್ಲಿ ಮೈಲಾರಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದರಿಂದ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳಾದ ಹಣಮಂತ ದಶಪಳ್ಳಿ, ಜಗದೀಶ ಪಾಟೀಲ್ ಪ್ರಕಟಿಸಿದರು.
ನಿರ್ದೇಶಕರಾದ ಜಗದೇವಯ್ಯ ಮಠಪತಿ, ಬಸವರಾಜ ಪೂಜಾರಿ, ವಿರೂಪಾಕ್ಷ ಹೂಗಾರ, ಲಿಯಾಖತ್ ಅಲಿ ಮೋಜನ್, ಗುಂಡುರಾವ ಲಾಳಿ, ಬಸವರಾಜ ಹಿರೇಪೂಜಾರಿ, ಸಿದ್ದಪ್ಪ ಬಾಳದ, ಸಂಗೀತಾ ನರಸಗೊಂಡ, ಪಾರ್ವತಿ ಬೆಕನಾಳ, ಶ್ರೀಮಂತ ತಳವಾರ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಮೇಶ ಮರಗೋಳ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ, ಇವಣಿ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಪ್ರಮುಖರಾದ ಬಸವರಾಜ ಹೊಸಳ್ಳಿ, ಮಲ್ಲಿಕಾರ್ಜುನ ನರಸಗೊಂಡ, ಬಸವರಾಜ ಚಂದನಕೇರಿ, ಪೀರಪ್ಪ ದೊಡ್ಡಮನಿ, ನಾಮದೇವ ರಾಠೋಡ್, ಸುನೀಲ್ ಅಮ್ಮಗೋಳ, ರತನ್ ಕನ್ನಡಗಿ, ದಿಲೀಪ್ ದೊಡ್ಡಮನಿ, ಶಿರಾಜ್ ಪಟೇಲ್, ಶರಣು ಬೆಕನಾಳ, ಚನ್ನಬಸಪ್ಪ ಜೀವಣಗಿ, ರೇವಣಸಿದ್ದಪ್ಪ ಬೆಕನಾಳ, ಮಾಣಿಕ ಸಿಂಧೆ, ಶಿವಕುಮಾರ ಮಾಡಬೂಳ, ಷರೀಫ್ ಕೋಡ್ಲಿ, ಸಿದ್ದಣ್ಣ ಪೂಜಾರಿ ಇತರರಿದ್ದರು.
ವಿಜಯೋತ್ಸವ: ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಪಿಕೆಪಿಎಸ್ ನೂತನ ಅಧ್ಯಕ್ಷರಾ ಸುನೀಲ್ ದೊಡ್ಡಮನಿ ಹಾಗೂ ಉಪಾಧ್ಯಕ್ಷರಾಗಿ ಗುರುನಾಥ ದೇಸಾಯಿ ಅವರು ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು, ಬೆಂಗಲಿಗರು ವಿಜಯೋತ್ಸವ ಆಚರಿಸಿದರು.