ಕಾಳಗಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ಅಣವೀರಪ್ಪ ನಾಗೂರ ಆಯ್ಕೆ, ವೃತ್ತಿ ಬದುಕಿನಂತೆ ನಿವೃತ್ತಿಯಲ್ಲೂ ಕೆಲಸ ಮಾಡುವೆ: ನಾಗೂರ
ನಾಗಾವಿ ಎಕ್ಸ್ಪ್ರೆಸ್
ಕಾಳಗಿ: ತಾಲೂಕು ನಿವೃತ್ತ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಅಣವೀರಪ್ಪ ನಾಗೂರ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಶ್ರೀನೀಲಕಂಠ ಕಾಳೇಶ್ವರ ಮಂಗಲ ಮಂಟಪದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ನಿವೃತ್ತ ನೌಕರರೆಲ್ಲರೂ ಸೇರಿಕೊಂಡು ಭಾನುವಾರ ನಡೆಸಿರುವ ಸಭೆಯಲ್ಲಿ ನಿರ್ಣಯ ಕೈಗೊಂಡರು.
ಕಾಳಗಿ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶರಣಗೌಡ ಪೋಲಿಸ್ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಣವೀರಪ್ಪ ನಾಗೂರ ಅವರ ವೃತ್ತಿ ಬದುಕು ಹಾಗೂ ನಿವೃತ್ತಿ ಜೀವನದಲ್ಲೂ ಅವರು, ಸಲ್ಲಿಸುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಅರಿತು ನಿವೃತ್ತಿ ನೌಕರರು ಒಕ್ಕೋರಲಿನಿಂದ ಅವಿರೋಧ ಆಯ್ಕೆ ಮಾಡಲಾಗಿದೆ.
ತಾಲೂಕು ನಿವೃತ್ತ ನೌಕರರ ಸಂಘ ನೂತನ ಅಧ್ಯಕ್ಷ ಅಣವೀರಪ್ಪ ನಾಗೂರ ಮಾತನಾಡಿ, ನನ್ನ ವೃತ್ತಿ ಬದುಕು ಹಾಗೂ ನಿವೃತ್ತಿಯ ನಂತರದ ಜೀವನಶೈಲಿಯನ್ನಾಧರಿಸಿ ಕಾಳಗಿ ತಾಲೂಕಿನ ನಿವೃತ್ತ ನೌಕರರ ಸಂಘದ ನೂತನ ಅಧ್ಯಕ್ಷನಾಗಿ ಆಯ್ಕೆ ಮಾಡಿದಕ್ಕಾಗಿ ವೃತ್ತಿ ಬದುಕಿನಲ್ಲಿ ಕೆಲಸ ಮಾಡಿರುವಂತೆಯೇ ನಿವೃತ್ತಿಯಲ್ಲೂ ಕೂಡ ತಾಲೂಕಿನ ನಿವೃತ್ತಿ ನೌಕರರ ಸರ್ವತೋಮುಖ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುವೆ ಎಂದು ಹೇಳಿದರು.
ಸಂಘದ ನೂತನ ಪದಾಧಿಕಾರಿಗಳು:
ಮಹ್ಮದ ಘುಡುಸಾಬ ಕಮಲಾಪೂರ (ಗೌರವಾಧ್ಯಕ್ಷರು), ಅಣವೀರಪ್ಪ ನಾಗೂರ (ಅಧ್ಯಕ್ಷರು), ನಾಗರಾಜ ಹೆಬ್ಬಾಳ, ನಾಗಪ್ಪ ಬೀದಿಮನಿ (ಉಪಾಧ್ಯಕ್ಷರು), ತಾರಚಂದ ಜಾಧವ (ಪ್ರಧಾನ ಕಾರ್ಯದರ್ಶಿ), ಅಣ್ಣರಾವ ಮಠಪತಿ (ಖಜಾಂಚಿ), ಅಂಬಣ್ಣ ಹೂಗೊಂಡ, ಇಬ್ರಾಹಿಂ ಪಾಶಾ ಗಿರಣಿಕರ (ಸಂಘಟನಾ ಕಾರ್ಯದರ್ಶಿ), ನಾಗೀಂದ್ರಪ್ಪ ಮುಚ್ಚಟ್ಟಿ, ಸಿದ್ದಣ್ಣ ಭೀಮಳ್ಳಿ (ಜಂಟಿ ಕಾರ್ಯದರ್ಶಿ), ಶಾಮರಾವ ಕಡಬೂರ (ಸಾಂಸ್ಕೃತಿಕ ಕಾರ್ಯದರ್ಶಿ).
ಈ ಸಂದರ್ಭದಲ್ಲಿ ಕಾಶಿನಾಥ ಭಂಟನಳ್ಳಿ, ಸೈಯದ್ ಮಕಬೂಲ್, ತಿಪ್ಪಣ್ಣ ಸಿರಿಮನಿ, ನೀಲಕಂಠ ನಾಗೂರ, ತುಕರಾಮ ಸಾಬನೆ, ಹಣಮಂತರಾವ ಹಡಪಾದ, ಖಾಜಾಸಾಬ ಕಂದಗೋಳ, ತುಳಜಾರಾಮ ಸಾಬನೆ ಸೇರಿದಂತೆ ಇತರರು ಇದ್ದರು.