ಚಿತ್ತಾಪುರ ಓಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ತರಬೇತಿ ಮುಕ್ತಾಯ, ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರಂಗ ಮಂಟಪದ ಆವರಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಚಿತ್ತಾಪುರ ಟೌನ್ ಹಾಗೂ ಝೆನ್ ಕಿಟೋರಿಯೋ ಕರಾಟೆ ಶಾಲೆ ಚಿತ್ತಾಪುರ ಇವರ ಸಹಯೋಗದಲ್ಲಿ 2024-25 ನೇ ಸಾಲಿನ ಓಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ತರಬೇತಿಯ ಮುಕ್ತಾಯ ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಸಮಾರಂಭ ನಡೆಯಿತು.
50 ವಿದ್ಯಾರ್ಥಿಗಳು ಆರೆಂಜ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಶಸ್ತಿ ಪತ್ರ ಪಡೆದುಕೊಂಡರು. ಕರಾಟೆ ತರಬೇತುದಾರರಾದ ಸೆನ್ಸಾಯ ಕುಮಾರ್, ಮಹಾದೇವ್ ಎಸ್ ಎ, ಮತ್ತು ಮುಖ್ಯ ಅತಿಥಿಗಳು ಹಾಗೂ ನಿರ್ಣಾಯಕರಾಗಿ ಸೆನ್ಸಾಯ ಹಣಮಂತ್ ಭರತನೂರ್ ಹಾಗೂ ಸೆನ್ಸಾಯ ಕುಮಾರಿ ಲಕ್ಷ್ಮಿ ರಾಠೋಡ್ ಇದ್ದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಬಸವರಾಜ್ ಅವಂಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.