Oplus_131072

ಚುನಾವಣೆ ಅಕ್ರಮ | ಮಾಡಬೂಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಅನರ್ಹಗೊಳಿಸಲು ಆಗ್ರಹ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಮಾಡಬೂಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಅಕ್ರಮವಾಗಿ ನಡೆದಿದೆ ಹೀಗಾಗಿ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಸಂಘದ ಸದಸ್ಯರು ಹಾಗೂ ಮುಖಂಡರು ಸೇಡಂ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಿದ್ದಾರೆ.

ಮುಖಂಡ ಹಣಮಂತ ಬೆಂಕಿ ಮುಗುಟಾ ಮಾತನಾಡಿ, ಮಾಡಬೂಳ ಗ್ರಾಮದಲ್ಲಿ ಹೊಸದಾಗಿ ಸಂಘವು ಪ್ರಾರಂಭವಾಗಿದ್ದು, ಇದರ ಚುನಾವಣೆಯ ಮುನ್ನ ಸಂಘದ ಸದಸ್ಯರಿಗೆ ಯಾವುದೇ ನೋಟಿಸು ನೀಡದೆ ಮತ್ತು ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರಿಗೆ ಮಾಹಿತಿ ನೀಡದೇ ಚುನಾವಣೆಯನ್ನು ನಡೆಸಿರುತ್ತಾರೆ. ಆದಕಾರಣ ಅಕ್ರಮವಾಗಿ ಆಯ್ಕೆಯಾದ ಆಡಳಿತ ಮಂಡಳಿಯನ್ನು ಅನರ್ಹಗೊಳಿಸಿ ಮತ್ತೊಮ್ಮೆ ನಿಯಮಬದ್ಧವಾಗಿ ಚುನಾವಣೆ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಗಾವಿ ಗ್ರಾಮದಲ್ಲಿ ನಾಗರಾಜ ಕಲ್ಯಾಣರಾವ ಇವರು ಮುಖ್ಯ ಪ್ರವರ್ತಕ ಇದ್ದು. ಇವರು ತಮ್ಮ ಮನೆಯಲ್ಲಿ ಅಕ್ರಮವಾಗಿ ಚುನಾವಣೆ ಮಾಡಿದ್ದಾರೆ ಮತ್ತು ಅವರ ತಂದೆಗೆ ಉಪಾಧ್ಯಕ್ಷರಾಗಿ ಮಾಡಿರುತ್ತಾರೆ. ತಮ್ಮ ಮನೆಯಲ್ಲಿ 5 ಜನ ಸದಸ್ಯರು ಚುನಾವಣಾ ಅಧಿಕಾರಿಗೆ ತಪ್ಪು ಮಾಹಿತಿ ನೀಡಿ ಚುನಾವಣೆಯನ್ನು ಅಕ್ರಮವಾಗಿ ಸಂಘದ ಮುಖ್ಯ ಪ್ರವರ್ತಕರು ಚುನಾವಣೆಯನ್ನು ಜರುಗಿಸಿರುತ್ತಾರೆ. ಆದಕಾರಣ ಇವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮವನ್ನು ಜರುಗಿಸಬೇಕು ಹಾಗೂ ಸಂಘದ ಆಡಳಿತ ಮಂಡಳಿಯನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಹಣಮಂತ ಬೆಂಕಿ ಮುಗುಟಾ, ಸಿದ್ದಣ್ಣಾ ವಚ್ಚಾ, ಧನರಾಜ ರಾಠೋಡ ಹದನೂರ ತಾಂಡಾ, ಮಕಸೂದ್ ಪಟೇಲ್  ಮುಗುಟಾ, ಭೀಮರಾವ ಮಾವನೂರ ಸಂಗಾವಿ, ಕಲ್ಯಾಣಿ ಸಾಬಣ್ಣಾ ದೊಡ್ಡಮನಿ ವಚ್ಚಾ, ಹಮೀದ್ ಪಟೇಲ್ ಸಂಗಾವಿ, ಮಂಜುನಾಥ ಕಾಳನೂರ ವಚ್ಚಾ, ಮಲ್ಲಣಗೌಡ ಪೊಲೀಸ್ ಪಾಟೀಲ ಮಾಡಬೂಳ, ಮಲ್ಲಿಕಾರ್ಜುನ ಸಜ್ಜನ ಮಾಡಬೂಳ, ಕಿರಣ್ ಹಾದಿಮನಿ, ತೌಫಿಕ್ ಪಟೇಲ್ ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!