Oplus_0

ಮಾಲಗತ್ತಿ ಚನ್ನಬಸವ ಶರಣರಿಗೆ ಸತ್ಕಾರ, ಕಾಡಾಗಿದ್ದ ಹಿರೋಡೇಶ್ವರ ಕ್ಷೇತ್ರವನ್ನು ಕೈಲಾಸವನ್ನಾಗಿ ಮಾಡಿದ ಕೀರ್ತಿ ಚನ್ನಬಸವ ಶರಣರಿಗೆ ಸಲ್ಲಲ್ಲಿದೆ: ನಾಲವಾರ ಶ್ರೀ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನದಿಂದ ಪ್ರಸಿದ್ಧ ಪಡೆದ ಸುಕ್ಷೇತ್ರವಾಗಿದ್ದು ಇಷ್ಟರಲ್ಲೇ ಭೇಟಿ ನೀಡಲಾಗುವುದು ಎಂದು ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸಿದ್ದತೋಟೇಂದ್ರ ಶಿವಾಚಾರ್ಯರು ಹೇಳಿದರು.

ಮಾಲಗತ್ತಿ ಶ್ರೀ ಚನ್ನಬಸವ ಶರಣರು ನಾಲವಾರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸತ್ಕರಿಸಿ ಮಾತನಾಡಿದರು.

ಕಾಡು ಪ್ರದೇಶವಾಗಿದ್ದ ಹಿರೋಡೇಶ್ವರ ಸುಕ್ಷೇತ್ರವನ್ನು ಕೈಲಾಸವನ್ನಾಗಿ ಮಾಡಿ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿ ಮಾಡಿರುವ ಕೀರ್ತಿ ಚನ್ನಬಸವ ಶರಣರಿಗೆ ಸಲ್ಲಲ್ಲಿದೆ ಹಾಗೂ ನಿತ್ಯ ಅನ್ನ ದಾಸೋಹ ಸೇವೆ ನಡೆಯುತ್ತಿರುವುದು ಮೆಚ್ಚುವಂಥದ್ದು ಎಂದು ಶ್ರೀಗಳು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಿವಕುಮಾರ ಸುಣಗಾರ್ ನಾಲವಾರ, ಈಶ್ವರ್ ಮುಗುಳನಾಗಾವ್, ರವಿ ಯರಗೋಳ, ಸಾಬಣ್ಣ ಬಳಬಾ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!