Oplus_131072

ನಾಗಾವಿ ಎಕ್ಸಪ್ರೆಸ್ ಸುದ್ದಿಗೆ ಸ್ಪಂದನೆ, ಮೊಗಲಾ ಹದಗೆಟ್ಟ ರಸ್ತೆ ಸುಧಾರಣೆಗೆ ಮುಂದಾದ ಪುರಸಭೆ: ಗ್ರಾಮಸ್ಥರು ಹರ್ಷ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟು ಸಂಚಾರಕ್ಕೆ ತುಂಬಾ ತೊಂದರೆಯಾಗಿತ್ತು ಇದರಿಂದ ಸಾರಿಗೆ ಬಸ್ ಸಂಚಾರ ಕೂಡ ಸ್ಥಗಿತಗೊಂಡಿತ್ತು ಈ ಕುರಿತು ನಾಗಾವಿ ಎಕ್ಸಪ್ರೆಸ್ ನಲ್ಲಿ ಬುಧವಾರ ಪ್ರಸಾರವಾದ “ಮೊಗಲಾ ಗ್ರಾಮದ ಹದಗೆಟ್ಟ ರಸ್ತೆಯಿಂದ ಸಾರಿಗೆ ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರು ಪರದಾಟ, ಕೂಡಲೇ ಬಸ್ ಸಂಚಾರ ಪ್ರಾರಂಭಿಸಲು ಗ್ರಾಮಸ್ಥರ ಆಗ್ರಹ” ಎನ್ನುವ ಸುದ್ದಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿಗಳು ಗುರುವಾರ ರಸ್ತೆ ಸುಧಾರಣೆಗೆ ಮುಂದಾಗಿದ್ದಾರೆ ಇದರಿಂದ ಗ್ರಾಮಸ್ಥರು ಹರ್ಷಗೊಂಡು ಪತ್ರಿಕೆಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಕೃತಜ್ಞತೆಗಳು ಸಲ್ಲಿಸಿದ್ದಾರೆ.

ತಾಲೂಕಿನ ಮೊಗಲಾ ಗ್ರಾಮದ ರಸ್ತೆ ಹದಗೆಟ್ಟಿದ್ದರಿಂದ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡು ಒಂದು ತಿಂಗಳಾಗಿದೆ ಇದರಿಂದ ಪ್ರಯಾಣಿಕರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.

ಗ್ರಾಮದಿಂದ ಚಿತ್ತಾಪುರ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿತ್ತು.‌ ಅಲ್ಲದೇ ನಿತ್ಯ ವ್ಯಾಪಾರ ವಹಿವಾಟುಗಾಗಿ ಹಾಗೂ ಮಹಿಳೆಯರಿಗೆ, ರೈತರಿಗೆ ಹಾಗೂ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿತ್ತು, ಬಸ್ ಇಲ್ಲದೆ ಇರುವುದರಿಂದ ನಿತ್ಯದ ಕೆಲಸ ಕಾರ್ಯಗಳಿಗೆ ತೊಡಕು ಉಂಟಾಗಿತ್ತು ಈಗ ರಸ್ತೆ ಸುಧಾರಣೆ ಆಗುತ್ತಿದೆ. ಆದ್ದರಿಂದ ಸಾರಿಗೆ ಬಸ್ ಪುನಃ ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!