ರಾಯಚೂರು ವಿಶ್ವವಿದ್ಯಾಲಯ ಕರಾಟೆ ತಂಡಕ್ಕೆ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಶಹಾಪುರ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ 5 ನೇ ಸೆಮಿಸ್ಟರ್ ವಿದ್ಯಾರ್ಥಿ ಮೌನೇಶ ಬಸವರಾಜ ಹಾಗೂ ಬಿ.ಎ 3 ನೇ ಸೆಮಿಸ್ಟರ್ ವಿದ್ಯಾರ್ಥಿ ಮಲ್ಲಿಕಾರ್ಜುನ ಮಾರುತಿ ಇವರು ರಾಯಚೂರು ವಿಶ್ವವಿದ್ಯಾಲಯದ ಕರಾಟೆ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮಧ್ಯಪ್ರದೇಶದ ಎಲ್.ಎನ್.ಸಿ.ಟಿ ವಿಶ್ವವಿದ್ಯಾಲಯದಲ್ಲಿ ಜರುಗುವ ಕರಾಟೆ ಪಂದ್ಯಾವಳಿಯಲ್ಲಿ ರಾಯಚೂರು ವಿಶ್ವವಿದ್ಯಾಲಯ ತಂಡದಿಂದ ಸ್ಪರ್ಧಿಸಲಿದ್ದಾರೆ. ಈ ವಿಧ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಸ್ ರಾಂಪೂರೆ, ಕ್ರೀಡಾ ಸಂಚಾಲಕ ಡಾ.ಎಮ್.ಎನ್ ಸೌದಾಗರ್ ಮತ್ತು ದೈಹಿಕ ಶಿಕ್ಷಣ ನಿರ್ಧೇಶಕ ಡಾ. ಪ್ರದೀಪಕುಮಾರ ಎಮ್. ಪಾಟೀಲ್ ಮತ್ತು ಕಾಲೇಜಿನ ಎಲ್ಲಾ ಭೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.