Oplus_0

ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಚಿತ್ತಾಪುರ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಚೆನ್ನಯ್ಯ ವಸ್ತ್ರದ್, ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ ಸಮ್ಮುಖದಲ್ಲಿ ಚಿತ್ತಾಪುರ ತಾಲೂಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಸ್ವಾಮಿ ಮಿನಿ ಹಾಲ್ ನಲ್ಲಿ ಭಾನುವಾರ ನಡೆದ ಸಭೆಯಲ್ಲಿ, ತಾಲೂಕು ಗೌರವ ಅಧ್ಯಕ್ಷರನ್ನಾಗಿ ಉದಯಕುಮಾರ. ಎಚ್. ಸಾಗರ್, ತಾಲೂಕು ಅಧ್ಯಕ್ಷರನ್ನಾಗಿ ಅಣ್ಣಾರಾಯ. ವಿ. ಇವಣಿ, ಉಪಾಧ್ಯಕ್ಷರಾಗಿ ನಾಗೇಶ. ಎ. ಹಲಗಿ, ಪ್ರಧಾನ ಕಾರ್ಯದರ್ಶಿ ಶಾಮಣ್ಣ. ಡಿ.ಮೇಧಾ, ಸಹಕಾರ್ಯದರ್ಶಿ ಚಂದ್ರಕಾಂತ. ವಿ. ಉಪ್ಪಿನ್, ಖಜಾಂಚಿಯಾಗಿ ಸಂಗಮೇಶ ಪಾಟೀಲ್ ಹಾಗೂ ಇತರೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜೇವರ್ಗಿ ಅಧ್ಯಕ್ಷ ವೀರೇಶ ಮಠ, ಸೂರ್ಯಕಾಂತ ಗಾರಂಪಳ್ಳಿ, ಮಹಾಲಕ್ಷ್ಮಿ.ಸಿ.ಪಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!