ಸನ್ನತಿ ಬ್ರಿಜ್ ಬ್ಯಾರೇಜ್ ಗೆ ಭೇಟಿ, ಭೀಮಾ ನದಿಯ ಪ್ರವಾಹ ಕುರಿತು ಮುನ್ನೆಚ್ಚರಿಕೆ ವಹಿಸಲು ತಹಸೀಲ್ದಾರ್ ಸೂಚನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸನ್ನತಿ ಬ್ರಿಜ್ ಕಂ ಬ್ಯಾರೇಜ್ ಗೆ ಭೇಟಿ ನೀಡಿ ನೀರಿನ ಪ್ರಮಾಣದ ಕುರಿತು ಗುರುವಾರ ಪರಿಶೀಲನೆ ಮಾಡಿದ್ದು, ಸದ್ಯ ನೀರಿನ ಮಟ್ಟ 5.3 ಮೀಟರ್ ಇದ್ದು 37 ಗೇಟ್ ಗಳ ಪೈಕಿ 9 ಗೇಟುಗಳನ್ನು ತೆರೆಯಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.
ಸನ್ನತಿ, ಕನಗನಹಳ್ಳಿ, ಕೊಲ್ಲೂರು, ಮಾರಡಗಿ ಗ್ರಾಮಗಳಿಗೆ ಭೇಟಿ ನೀಡಿ ಭೀಮಾ ನದಿಯ ಪ್ರವಾಹ ಕುರಿತು ಮುನ್ನೆಚ್ಚೆರಿಕೆ ವಹಿಸಲು ಗ್ರಾಮಸ್ಥರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಬಿಜಿಎನ್ಎಲ್ ಇಇ ಮತ್ತು ಎಇ, ಸನ್ನತಿ ಬ್ರಿಜ್ ವಿಭಾಗದ ಅಧಿಕಾರಿ ಮತ್ತು ವಾಡಿ ಪಿಎಸ್ಐ ತಿರುಮಲೇಶ್ ಸೇರಿದಂತೆ ಇತರರು ಇದ್ದರು.