ಶಹಾಬಾದ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಶಂಕರ ಅಳ್ಳೋಳ್ಳಿ, ಗೌರವಾಧ್ಯಕ್ಷರಾಗಿ ಸುರೇಶ್ ಮೆಂಗನ್ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವ ಸಮಿತಿಗೆ ಶಹಾಬಾದ ತಾಲೂಕು ಅಧ್ಯಕ್ಷರಾಗಿ ಶಂಕರ ಅಳ್ಳೋಳ್ಳಿ ಹಾಗೂ ಗೌರವಾಧ್ಯಕ್ಷರಾಗಿ ಸುರೇಶ್ ಮೆಂಗನ್ ಅವರು ಆಯ್ಕೆಯಾಗಿದ್ದಾರೆ.
ನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಬಾಬಾಸಾಹೇಬ ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವ ಸಮಿತಿಯ ಸಭೆಯಲ್ಲಿ ಹಿರಿಯರ ಮತ್ತು ಯುವಕರ ಹಾಗೂ ಎಲ್ಲರ ಅಭಿಪ್ರಾಯದ ಮೇರೆಗೆ ಸರ್ವಾನುಮತದಿಂದ ಅಧ್ಯಕ್ಷರಾಗಿ ಶಂಕರ ಅಳೋಳ್ಳಿ ಮತ್ತು ಗೌರವಾಧ್ಯಕ್ಷರಾಗಿ ಹಿರಿಯ ಮುಖಂಡ ಸುರೇಶ ಮೆಂಗನ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಹಿಂದಿನ 2023-24 ಸಾಲಿನ 133ನೇ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ವಹಿಸಿದ್ದರು.
ಈ ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ನಾಗರಾಜ ಸಿಂಗೆ, ಹೋರಾಟಗಾರ ಕೃಷ್ಣಪ್ಪ ಕರಣಿಕ, ಸಮಾಜ ಸೇವಕ ವಿಜಯಕುಮಾರ ಹಳ್ಳಿ, ಮಹಾದೇವ ತರನಳ್ಳಿ, ರಾಜೇಶ ಯನಗುಂಟಿ, ಭರತ ಧನ್ನಾ, ಭೀಮಾಶಂಕರ ಕಾಂಬಳೆ, ಬಸವರಾಜ ಮಯೂರ, ಪಿಎಸ್ ಮೇತ್ರಿ, ಶಿವಶಾಲ್ ಪಟ್ಟಣಕರ, ಮಲ್ಲಣ್ಣ ಮಸ್ಕಿ, ಸುಭಾಷ ಸಾಕ್ರೆ, ನರಸಿಂಹಲು ರಾಯಚೂರ, ಸತೀಶ ಕೋಬಾಳ, ವಸಂತ ಕಾಂಬಳೆ, ಸಂದೀಪ ಕಟ್ಟಿ, ಮೋಹನ ಹಳ್ಳಿ, ಸ್ನೇಹಿಲ ಜಾಯಿ, ಜೈ ಭೀಮ್, ಮಚ್ಚಿಂದರ ಜೋಗಿ, ಮನೋಹರ ಕೊಳೂರ, ಪುನೀತ ಹಳ್ಳಿ, ಸುನಿಲ ಮೆಂಗನ, ರಾಕೇಶ ಜಾಯಿ ಮಲ್ಲಿಕಾರ್ಜುನ ದೊಡ್ಡಿ ಸೇರಿದಂತೆ ಹೊನಗುಂಟಿ, ತೋನಸನಹಳ್ಳಿ, ಮರತೂರ, ಭಂಕೂರ, ಗೋಳಾ, ಮಾಲಗತ್ತಿ ಗ್ರಾಮಗಳ ಜೊತೆ ತಾಲೂಕಿನ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಶಹಾಬಾದ ವರದಿ-ನಾಗರಾಜ್ ದಂಡಾವತಿ