25 ಜೋಡಿ ಎತ್ತುಗಳ ಅದ್ದೂರಿ ಮೆರವಣಿಗೆ, ಜಾನುವಾರು ಸಂತತಿ ಉಳಿಸಿದರೆ ಜನ ಜೀವನ ಉಳಿದಂತೆ: ದೇಶಪಾಂಡೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಜಾನುವಾರುಗಳ ಸಂತತಿ ಉಳಿಸುವುದರಿಂದ ಜನ ಜೀವನ ಉಳಿಯುವುದು ಎಂದು ಪ್ರಗತಿಪರ ರೈತ ಉಲ್ಲಾಸ್ ದೇಶಪಾಂಡೆ ಅವರು ರೈತರಿಗೆ ಕಿವಿಮಾತು ಹೇಳಿದರು.
ತಾಲೂಕಿನ ತೆಂಗಳಿ ಗ್ರಾಮದಲ್ಲಿ ರೈತರ ಹಬ್ಬವಾದ ಕಾರ ಹುಣ್ಣಿಮೆ ನಿಮಿತ್ತ ಗ್ರಾಮದ ಪ್ರಗತಿಪರ ರೈತ ಉಲ್ಲಾಸ್ ದೇಶಪಾಂಡೆ ಅವರ ನೇತೃತ್ವದಲ್ಲಿ 25 ಜೋಡಿ ಎತ್ತುಗಳ ಮೆರವಣಿಗೆ ನಡೆಯಿತು. ಈ ವೇಳೆ ಮಾತನಾಡಿದ ಅವರು ಇತ್ತಿಚಿನ ದಿನಗಳಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಎತ್ತುಗಳನ್ನು ಬಳಸದೆ ಯಂತ್ರೋಪಕರಣಗಳಿಗೆ ಮತ್ತು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುವುದರಿಂದ ಜಾನುವಾರುಗಳ ಸಂತತಿ ಕಡಿಮೆ ಆಗುವುದರ ಜೊತೆಗೆ ಹೋಲದಲ್ಲಿನ ಮಣ್ಣಿನ ಸತ್ವ ಕಡಿಮೆಯಾಗಿ ಬೆಳೆದ ಇಳುವರಿಯೂ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಮೊದಲು ಜಾನುವಾರುಗಳನ್ನು ಬಳಸಿ ನೇಗಿಲಿನಿಂದ ಹೊಲಗಳನ್ನು ಊಳುವುದರ ಜೊತೆಗೆ ಜಾನುವಾರುಗಳ ಗೊಬ್ಬರ ಬಳಸುತ್ತಿರುವುದರಿಂದ ಇಳುವರಿ ಜೊತೆಗೆ ಆಹಾರದಲ್ಲಿ ಪೌಷ್ಟಿಕಾಂಶ ಇರುತ್ತಿತ್ತು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸುವುದರಿಂದ ಆಹಾರದಲ್ಲಿನ ಪೌಷ್ಟಿಕಾಂಶವು ಕಡಿಮೆಯಾಗುತ್ತಿದ್ದು ಜನರ ಆಯಸ್ಸು ಕಡಿಮೆ ಆಗುತ್ತಿದೆ ಎಂದರು.
ಅದ್ದರಿಂದ ರೈತರು ಯಂತ್ರೋಪಕರಣಗಳಿಗೆ ಮೊರೆಹೋಗದೆ ಜಾನುವಾರುಗಳನ್ನು ಉಳಿಸಿ ಉಳುಮೆ ಮಾಡಿ ಫಲವತ್ತಾದ ಭೂಮಿಯ ಸತ್ವವನ್ನು ಉಳಿಸಿದರೆ ನಮ್ಮ ಜೀವವನ್ನು ದೀರ್ಘಕಾಲ ಉಳಿಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಕೆ.ಸಿ.ಸಿ.ಐ, ನಿಕಟಪೂರ್ವ ಅಧ್ಯಕ್ಷ ಶಶಿಕಾಂತ ಪಾಟೀಲ್, ಕೆ.ಸಿ.ಸಿ ಐ ಕೃಷಿ ಉಪ ಸಮಿತಿ ಅಧ್ಯಕ್ಷ ಜಗದೀಶ್ ಗಾಜರೆ, ಗ್ರಾಮದ ಮುಖಂಡರಾದ ವಿರಭದ್ರಯ್ಯ ಸ್ವಾಮಿ ಸಾಲಿಮಠ, ಓಂಪ್ರಕಾಶ ಹೆಬ್ಬಾಳ, ಫಕಿರಯ್ಯ ಸ್ವಾಮಿ ಸ್ಥಾವರಮಠ, ಬಸವರಾಜ ಬಸ್ತೆ, ಮಲ್ಲಿಕಾರ್ಜುನ ಕೇಶ್ವಾರ್, ಮಲ್ಲಿಕಾರ್ಜುನ ದೇಸಾಯಿ, ವಿಶ್ವನಾಥ್ ಹಿಲ್ಲಾ, ಸಲಿಂ ಮುಲ್ಲಾ, ರಾಜಕುಮಾರ ಪಟೇದ್, ಶರಣು ತೆಲಗಾಣಿ, ಅಣ್ಣಾರಾಯ ಹೊಂದೆ, ಶಿವಶರಣಪ್ಪ ಹೇರೂರ್, ಮಲ್ಲಿಕಾರ್ಜುನ ಮೇಲ್ಕೇರಿ, ಇಬ್ರಾಹಿಂ ಪಟೇಲ್, ರವೀಂದ್ರ ಭೀಮಶೆನರಾವ ಟೆಂಗಳಿ, ಪ್ರಭು ನೀಲಹಳ್ಳಿ ಸೇರಿದಂತೆ ಗ್ರಾಮಸ್ಥರು ಮತ್ತು ರೈತರು ಇದ್ದರು.