ಕೊಡ್ಲಾ ಉರಲಿಂಗ ಪೆದ್ದಿ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾದ ಡಾ. ಜ್ಞಾನಪ್ರಕಾಶ್ ಸ್ವಾಮೀಜಿ ಅವರಿಗೆ ಬೆಣ್ಣೂರಕರ್ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸೇಡಂ ತಾಲೂಕಿನ ಕೊಡ್ಲಾ ಉರಲಿಂಗ ಪೆದ್ದಿ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ನೇಮಕವಾದ ಡಾ. ಜ್ಞಾನಪ್ರಕಾಶ್ ಸ್ವಾಮೀಜಿ ಅವರನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಅವರು ಭಾನುವಾರ ಸನ್ಮಾನಿಸಿ ಗೌರವಿಸಿದರು.
ಮುಖಂಡರಾದ ಉದಯಕುಮಾರ್ ಸಾಗರ, ಚನ್ನಬಸಪ್ಪ ಭಂಗಿ, ಅಂಬರೀಷ್ ರಂಗನೂರ್ ಸೇರಿದಂತೆ ಇತರರು ಇದ್ದರು.