Oplus_0

ಬೆದರಿಕೆ ಹಾಕುವವರ ವಿರುದ್ಧ ಕ್ರಮಕ್ಕಾಗಿ ಎಸ್ ಪಿ ಅವರಿಗೆ ದೂರು: ವೀರಣ್ಣ ಯಾರಿ

ನಾಗಾವಿ ಎಕ್ಸಪ್ರೆಸ್

ವಾಡಿ: ಈ ಮೇಲ್ ಮೂಲಕ ಕಳೆದ ಆರು ತಿಂಗಳಿನಿಂದ ಬೆದರಿಕೆ ಸಂದೇಶ ರವಾನಿಸುತ್ತಿರುವವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ‌‌ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮನವಿ ಮಾಡಿದ್ದಾರೆ.

ನನ್ನ ಈ ಮೆಲ್ ಐಡಿಯಾದ gurudatta.wadi@rediffmail.comಗೆ ಸುಮಾರು ಆರು ತಿಂಗಳಿನಿಂದ ina.elarchi@etud.u-picardie.fr,dept.wcd.ceib@thamms-caterings.org,dept.wcd.ceib@thamms-caterings.org, ⚖️OFFICIAL NOTIFICATION//ADG0011456-GOV.IN24⚖️ ಈ ಮೇಲ್ ಐಡಿ ಮತ್ತು ವಿಳಾಸದಿಂದ ಪ್ರತಿದಿನ ನನ್ನ ವಿರುದ್ಧ ಭಯೋತ್ಪಾದನಾ, ರಾಷ್ಟ್ರ ದ್ರೋಹ ಸೇರಿದಂತೆ ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ, ಇದು ಜಾಮೀನು ರಹಿತ ವಾಗಿರುವುದರಿಂದ ತಕ್ಷಣ ನಿನಗೆ ಜೈಲಾಗುತ್ತದೆ ಎಂದು ಸುಳ್ಳು ಸಂದೇಶ ರವಾನಿಸಿ ನನ್ನನ್ನು ಸುಮಾರು ದಿನಗಳಿಂದ ಮಾನಸಿಕವಾಗಿ ಹಿಂಸಿಸಿದ್ದಾರೆ, ಇದರಿಂದ ಬಹಳಷ್ಟು ಘಾಷಿಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಇವಾಗ ಇದರ ಬಗ್ಗೆ ಗೊತ್ತಾಯಿತು ಇದು ಫೇಕ್ ಅಂತ, ಈ ರೀತಿಯಾಗಿ ಅನೇಕರಿಗೆ ತೊಂದರೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಗೊಳಾಕುತ್ತಿರುವ ಸಂದೇಶಗಳನ್ನು ರವಾನಿಸುತ್ತಿರುವವರ ವಿರುದ್ಧ ಕಾನೂನಿನ ಕ್ರಮಕೈಗೊಂಡು ಮಾನಸಿಕವಾಗಿ ಹಿಂಸೆಗೆ ಒಳಗಾದವರಿಗೆ ನ್ಯಾಯ ದೊರಕಿಸಿ ಎಂದು ದೂರು ಸಲ್ಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!