Oplus_0

ಚಿತ್ತಾಪುರದಲ್ಲಿ ಅಂಬೇಡ್ಕರ್ ಅವರ 68 ನೇ ಮಹಾ ಪರಿನಿರ್ವಾಣ ದಿನಾಚರಣೆ, ಅಂಬೇಡ್ಕರ್ ಅವರು ವಿಶ್ವ ಕಂಡ ಮಹಾ ಮಾನವತಾವಾದಿ: ನಾಗಯ್ಯ ಹಿರೇಮಠ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಬಾಬಾಸಾಹೇಬ ಅಂಬೇಡ್ಕರ್ ಅವರು ಶೋಷಿತರ, ದಮನಿತರ ಹಾಗೂ ಮಹಿಳೆಯರ ಪರ ಅವಿರತವಾಗಿ ಹೋರಾಟ ಮಾಡಿದ ವಿಶ್ವ ಕಂಡ ಮಹಾನ್ ಸಮಾಜ ಸುಧಾರಕರು ಹಾಗೂ ಮಹಾ ಮಾನವತಾವಾದಿಯಾಗಿದ್ದರು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 68 ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ತತ್ವಗಳು ಜಗತ್ತಿಗೇ ಬೆಳಕಾಗಿವೆ, ಅವರು ರಚಿಸಿರುವ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದೆ ಎಂದರು.

ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ ಮಾತನಾಡಿ, ಭಾರತ ಇಂದು ಸದೃಢವಾಗಿದೆ ಎಂದರೆ ಅದಕ್ಕೆ ಸಂವಿಧಾನವೇ ಮೂಲಕಾರಣ ಆಗಿದೆ ಎಂದರು. ಅಂಬೇಡ್ಕರ್ ಅವರು ಮುಂದಾಲೋಚನೆ ಮತ್ತು ದೂರದೃಷ್ಟಿಯಿಂದ ರಚಿಸಿದ ಸಂವಿಧಾನ ಶ್ರೇಷ್ಠ ಗ್ರಂಥವಾಗಿದೆ, ಅಂಬೇಡ್ಕರ್ ಅವರ ಸಾಹಿತ್ಯ ಹೆಚ್ಚು ಹೆಚ್ಚು ಪ್ರಸಾರ ಮಾಡಬೇಕು, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಗೌರವಿಸುವುದು ಎಲ್ಲರ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.

ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಇಒ ಅಕ್ರಂ ಪಾಷಾ, ಬಿಇಒ ಶಶಿಧರ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ್ ಗುರಿಕಾರ, ಸಿಡಿಪಿಒ ಆರತಿ ತುಪ್ಪದ್, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್, ಲೋಕೋಪಯೋಗಿ ಇಲಾಖೆಯ ಎಇಇ ಮಹ್ಮದ್ ಇಸ್ಮಾಯಿಲ್, ಜಿಪಂ ಎಇಇ ಬಾಲಕೃಷ್ಣ, ತೋಟಗಾರಿಕೆ ಅಧಿಕಾರಿ ಶಂಕರಗೌಡ ಪಾಟೀಲ, ಬಿಸಿಎಂ ಅಧಿಕಾರಿ ಸುನೀತಾ, ಎಪಿಎಂಸಿ ಕಾರ್ಯದರ್ಶಿ ಸವಿತಾ ಗೋಣಿ, ಪಿಎಸ್ಐ ಚಂದ್ರಾಮಪ್ಪ, ಟಿಪಿಒ ಶಿವಶರಣಪ್ಪ ಮಂಠಾಳೆ, ಮುಖಂಡರಾದ ಭೀಮಣ್ಣ ಸಾಲಿ, ಶಿವಕಾಂತ್ ಬೆಣ್ಣೂರಕರ್, ಚಂದ್ರಶೇಖರ ಕಾಶಿ, ಉದಯಕುಮಾರ್ ಸಾಗರ, ಮಲ್ಲಿಕಾರ್ಜುನ ಬೆಣ್ಣೂರಕರ್, ಮಹೇಶ್ ಜಾಯಿ, ದೇವಿಂದ್ರ ಕುಮಸಿ, ನಾಗೇಂದ್ರ ಬುರ್ಲಿ, ರಾಜಣ್ಣ ಕರದಾಳ, ಮಹಾಂತೇಶ್ ಬೊಮ್ಮನಹಳ್ಳಿ, ಜಗದೀಶ್ ಚವ್ಹಾಣ, ಲೋಹಿತ್ ಮುದಡಗಿ, ವಿಠಲ್ ಕಟ್ಟಿಮನಿ, ಶಿವಮೂರ್ತಿ ಯರಗಲ್, ಬಸವರಾಜ ಕೆಬಿ, ಸಾಗರ್ ಚಿಟ್ಟೆಕರ್, ನಿತೀನ್ ಟುಬಾಕ್, ಮಲ್ಲಿಕಾರ್ಜುನ ಮುಡಬೂಳಕರ್, ಶ್ರೀಕಾಂತ್ ಶಿಂಧೆ, ಭೀಮಾಶಂಕರ ದಂಡೆ, ಶಾಮರಾವ್ ಯರಗಲ್, ಬಾಬು ಕರದಾಳ, ವಿಜಯಕುಮಾರ್ ಶರ್ಮಾ, ಭೀಮರಾಯ ಹೊತಿನಮಡಿ, ಬಸವರಾಜ ಇಟಗಿ, ರಾಜು ಬುಳಕರ್, ನಾಗೇಶ್ ಹಲಗಿ, ಸೂರಜ್ ಕಲ್ಲಕ್, ಅಂಬರೀಷ್ ಸುಲೇಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!