ಕಾಳಗಿ ಯೋಗ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ, ಸಮಚಿತ್ತದ ವಿದ್ಯಾಭ್ಯಾಸಕ್ಕೆ ಯೋಗ ತುಂಬಾ ಸಹಕಾರಿ: ಕುಡಳ್ಳಿ
ನಾಗಾವಿ ಎಕ್ಸ್ಪ್ರೆಸ್
ಕಾಳಗಿ: ದೇಹದ ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಿ ನಿರೋಗಿಯಾಗಿ, ಯೋಗವು ಮಕ್ಕಳ ನಮಚಿತ್ತದ ವಿದ್ಯಾಭ್ಯಾಸಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ಯೋಗ ತರಬೇತುದಾರ ಸಂತೋಷ್ ಕುಡಳ್ಳಿ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಶ್ರೀಮತಿ ನಾಗರತ್ನಮ್ಮ ಶಿವಶರಣಪ್ಪ ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ 2024-25ನೇ ಸಾಲಿನಲ್ಲಿ ಕ್ರೀಡಾ ವಿಭಾಗದಲ್ಲಿ ಯೋಗ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿ, ಯೋಗದ ಆರಂಭ ಮತ್ತು ಮಹತ್ವ ತಿಳಿಸಿಕೊಡುವುದರ ಜೊತೆಗೆ ಹಲವು ಆಸನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ.ಪಂಡಿತ್ ಬೆಳಮಗಿ ಮಾತನಾಡಿ, ಈ ಯೋಗ ತರಬೇತಿಯು ಕಾಲೇಜಿನ ಇತರ ಕೋರ್ಸುಗಳನ್ನು ಕಲಿಯುವುದರ ಜೊತೆಗೆ ಹೆಚ್ಚುವರಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ, ಇದಕ್ಕಾಗಿ 30 ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅವಕಾಶ ನೀಡಲಾಗಿದೆ. ಮೂರು ತಿಂಗಳಲ್ಲಿ 30 ಗಂಟೆಗಳ ತರಬೇತಿ ಸಹ ನೀಡಲಾಗುತ್ತದೆ. ಆನಂತರ ಮೌಖಿಕ ಬರಹರೂಪದ, ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಗೌಡಪ್ಪ ಮಾಲಿಪಾಟೀಲ್, ಡಾ. ಬಿ. ಆರ್. ಅಣ್ಣಸಾಗರ್, ಚಿತ್ರಶೇಖರ ನಾಗೂರ್, ಸುಜಾತ ಮಾಕಲ್, ಡಾ.ಶಿವಶರಣಪ್ಪ ಮೋತಕಪಲ್ಲಿ, ರಾಜೇಂದ್ರ ಕುಮಾರ್, ಡಾ. ಗುರುಪ್ರಕಾಶ್ ಹೂಗಾರ್, ಡಾ. ಜ್ಯೋತಿ ಕುಲಕರ್ಣಿ, ಡಾ. ಶಾಂತಲಾ ಪಾಟೀಲ್,ಡಾ.ವೀರೇಂದ್ರ, ಗೋಪಾಲ್, ರೇವಣಸಿದ್ದಪ್ಪ, ಮಾಧುರಿ, ಬೋಧಕ ಭೋದಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಕುಮಾರಿ ಜಗದೇವಿ ಪ್ರಾರ್ಥಿಸಿದರು, ದೈಹಿಕ ಶಿಕ್ಷಣ ನಿರ್ದೇಶಕಿ ಜಯಲಕ್ಷ್ಮಿ ಹಾವಪ್ಪಗೋಳ ಸ್ವಾಗತಿಸಿದರು, ಕುಮಾರಿ ಬನಮ್ಮ ನಿರೂಪಿಸಿದರು, ಡಾ. ಶಿವಲೀಲಾ ಬಸವರಾಜ ವಂದಿಸಿದರು.