ಚಿತ್ತಾಪುರದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ದಿಗ್ಗಾಂವ ರಸ್ತೆಯ ನ್ಯೂ ಹನುಮಾನ್ ದೇವಸ್ಥಾನದ ಹತ್ತಿರ ಭೋವಿ ವಡ್ಡರ ಸಮಾಜದ ವತಿಯಿಂದ ಬುಧವಾರ ಶಿವಯೋಗಿ ಸಿದ್ದರಾಮೇಶ್ವರರ ಜಯಂತೋತ್ಸವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದಿಗ್ಗಾಂವ ಕಂಚಗಾರಹಳ್ಳದ ಶ್ರೀ ಮಲ್ಲಯ್ಯ ಸ್ವಾಮಿ ಸ್ಥಾವರಮಠ ಅವರು ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.
ಸಮಾಜದ ಮುಖಂಡರಾದ ಹಣಮಂತ ಸಂಜಪ್ಪ, ಭೀಮಾಶಂಕರ ಹಾಲಕುಂಟಿ, ನಾಗು ಬೇವನೂರಕರ್, ಜಗನ್ನಾಥ್ ಗುತ್ತೇದಾರ, ರಾಮು ಹರವಾಳ, ತಮ್ಮಣ್ಣ ಭೋಸಗಿ, ಕೃಷ್ಣ ಭಂಕಲಗಿ, ಈರಣ್ಣ ವಕ್ರಾಣಿ, ಅಮೀನ್ ಸಾಬ್ ಹರವಾಳ, ಶಂಕರ್ ಬೋಸಗಿ, ವೆಂಕಟೇಶ್ ಇಂಗಳಗಿ, ಶೇಖಪ್ಪ ಭಾಗೋಡಿ, ಸಂಜಯ ಬುಳಕರ್, ಸುಭಾಷ್ ಪವರ್, ರವಿ ವಿಟ್ಕರ್, ಯಮನಪ್ಪ ಭೋಸಗಿ, ವಿಠಲ್ ಕಟ್ಟಿಮನಿ, ಭೀಮಯ್ಯ ಬೋಸಗಿ ಸೇರಿದಂತೆ ಇತರರು ಇದ್ದರು.

