ಚಿತ್ತಾಪುರ ಎಪಿಎಂಸಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ರದ್ದುಪಡಿಸಲು ಕರವೇ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಎಪಿಎಂಸಿ ವಾಣಿಜ್ಯ ಮಳಿಗೆಗಳನ್ನು ಮೊದಲು ಖಾಲಿ ಮಾಡಿಸಿ ನಂತರ ಹರಾಜು ಪ್ರಕ್ರಿಯೆ ನಡೆಸಬೇಕು ಅಲ್ಲಿವರೆಗೆ ಈ ಪ್ರಕ್ರಿಯೆಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿ ಕರವೇ ನಾರಾಯಣಗೌಡ ಬಣ ಮುಖಂಡರು ಬುಧವಾರ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಮಾತನಾಡಿ, ಚಿತ್ತಾಪುರ ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಾಣಿಜ್ಯ ಮಳಿಗೆಗಳು ಹಂಚಿಕೆ ಮತ್ತು ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಅಂಗಡಿಗಳ ಸಂಖ್ಯೆ: 3,7,8 ಅಂಗಡಿಗಳು ಸರಕಾರದ ನಿಯಮದ ವಿರುದ್ದ ಯಾವುದೇ ಅಂಗಡಿಗಳು ಖಾಲಿ ಮಾಡಲಾರದೇ ಹರಾಜು ಪ್ರಕ್ರಿಯೆಯನ್ನು ಶುರು ಮಾಡಿರುವುದು ಖಂಡನೀಯ ಎಂದು ಹೇಳಿದರು.
ಮೊದಲು ಯಾವಾವು ಅಂಗಡಿಗಳು ಹರಾಜಿಗೆ ಸಿದ್ದಪಡಿಸಿದ್ದ ಅಂತಹ ಅಂಗಡಿಗಳು ಸಂಪೂರ್ಣ ಮುಚ್ಚಿದ ಮೇಲೆ ಅಂಗಡಿಗಳು ಹರಾಜಿಗೆ ಕೈಗೊಳ್ಳಬೇಕು. ಅಂಗಡಿಗಳ ಮುಂಭಾಗದ ಶೆಡ್ ನಲ್ಲಿ ಯಥಾವತ್ತಾಗಿ ನಡೆಯುತ್ತಿರುವ ಹೋಟೆಲಗಳನ್ನು ಸಂಪೂರ್ಣ ಬಂದ್ ಮಾಡಿಸಿ ಹರಾಜು ಪ್ರಕ್ರಿಯೆ ಮುಂದುವರಿಸಬೇಕು. ಮತ್ತು ಹರಾಜು ಪ್ರಕ್ರಿಯೆ ಮುಗಿದ ಮೇಲೆ ಹರಾಜು ಮಾಡಿದ ಬಿಡುದಾರರಿಗೆ ಅಂಗಡಿಯ ಬೀಗ ಕೊಡುವವರಿಗೆ ಯಾವುದೇ ತರಹದ ಅಂಗಡಿಯ ಅಂಗಳದಲ್ಲಿ ಹೋಟೆಲ್ ಆಗಲಿ ಅಥವಾ ಇನ್ನಿತರ ಯಾವುದೆ ಪ್ರಕ್ರಿಯೆ ಮಾಡದಂತೆ ತಡೆಹಿಡಿದು ಅಂಗಡಿಯ ಬೀಗ ಕೊಟ್ಟ ನಂತರ ಬಿಡುದಾರರು ತಮ್ಮ ತಮ್ಮ ಅಂಗಡಿ ಪ್ರಾರಂಭ ಮಾಡಲು ಅರ್ಹರಾಗುತ್ತಾರೆ ಎಂದು ಹೇಳಿದರು.
ಒಂದು ವೇಳೆ ಈ ಮನವಿ ಪತ್ರವನ್ನು ಕಡೆಗಣಿಸಿ ಯಾವುದೇ ಅಂಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಿಸದೇ ಹರಾಜನ್ನು ಮುಂದುವರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ತಮ್ಮ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಇರ್ಫಾನ್, ಮಾಜೀದ್, ಅವೇಜ್, ಮುನ್ನಾ, ಲತೀಫ್, ರಾಹುಲ್ ಸೇರಿದಂತೆ ಇತರರು ಇದ್ದರು