ಚಿತ್ತಾಪುರ ಪಿಎಲ್’ಡಿ ಬ್ಯಾಂಕ್ ಚುನಾವಣೆಯಲ್ಲಿ ಭೀಮನಳ್ಳಿ ಕ್ಷೇತ್ರದಿಂದ ರಾಮಣ್ಣ ನಾಟೀಕಾರ ನಾಮಪತ್ರ ಸಲ್ಲಿಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ.ಚಿತ್ತಾಪುರ (ಪಿಎಲ್’ಡಿ) ಚುನಾವಣೆಯಲ್ಲಿ ಭೀಮನಳ್ಳಿ ಬಿಸಿಎ ಕ್ಷೇತ್ರದಿಂದ ರಾಮಣ್ಣ ನಾಟೀಕಾರ ಅಲ್ಲೂರು.ಬಿ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾಧಿಕಾರಿಗೆ ಶನಿವಾರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಭೀಮನಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರಿಗೂಳಿ ವಾಡ್, ಮುಖಂಡ ಮಲ್ಲಣ್ಣ ಮೋಸಿನ್ ಉಪಸ್ಥಿತರಿದ್ದರು.