ಚಿತ್ತಾಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ ಜನ್ಮದಿನದ ಪ್ರಯುಕ್ತ ಅನ್ನಸಂತರ್ಪಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣ ಎದುರುಗಡೆ ಬುದ್ಧ ವಿಹಾರ ಹತ್ತಿರ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 83 ನೇ ಜನ್ಮದಿನದ ಪ್ರಯುಕ್ತ ಡಿಎಸ್ಎಸ್ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಚಾಲನೆ ನೀಡಿದರು.
ಈ ವೇಳೆ ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಶಿವಕಾಂತ ಬೆಣ್ಣೂರಕರ್, ಶೀಲಾ ಕಾಶಿ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಜಗನ್ನಾಥ ಮುಡಬೂಳಕರ್, ಸಂಜಯ ಬುಳಕರ್, ನಾಗೇಂದ್ರ ಬುರ್ಲಿ, ರಾಮಲಿಂಗ ಬಾನರ್, ಲೋಹಿತ್ ಮುದ್ದಡಗಿ, ಭೀಮರಾಯ ಹೊತಿನಮಡಿ, ನಾಗರೆಡ್ಡಿ ಗೋಪಸೇನ್, ಆನಂದ ಮೊಗಲಿ, ಬಸವರಾಜ ಮುಡಬೂಳಕರ್, ಅಂಬರೀಷ್ ಮತ್ತಿಮುಡ್, ದೇವಿಂದ್ರ ಕುಮಸಿ, ಶರಣು ತಲಾಟಿ, ರಾಜು ಬುಳಕರ್, ಶರಣು ಡೋಣಗಾಂವ, ಬಾಗು ದೊರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

