ಡಾ.ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬದ ನಿಮಿತ್ತ ಮಹಿಳೆಯರಿಗೆ ಸೀರೆ ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿಯ ಅಲೆಮಾರಿ ಜನಾಂಗದ ಬಡ ಮಹಿಳೆಯರಿಗೆ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 83ನೇಯ ಹುಟ್ಟುಹಬ್ಬದ ಪ್ರಯುಕ್ತ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ ಬುಳಕರ್ ಅವರ ನೇತೃತ್ವದಲ್ಲಿ ಸೀರೆ ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ ಪಟೇಲ್, ತಾಲೂಕು ಕೃಷಿಕ ಸಂಘದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಬುಡಗ ಜಂಗಮ ಜಿಲ್ಲಾಧ್ಯಕ್ಷ ಪಂಡಿತ್, ಬಂಜಾರ ಸಮಾಜದ ಮುಖಂಡರಾದ ಭೀಮಸಿಂಗ್ ಚವ್ಹಾಣ, ದೇವದಾಸ್ ಚವ್ಹಾಣ, ಸಾಮಾಜಿಕ ಜಾಲತಾಣ ಅಧ್ಯಕ್ಷ ಸುಭಾಷ್ ಪವಾರ, ಯುವ ಮುಖಾಂಡರಾದ ವಿಠಲ್ ಕಾಶಿ, ಯಲ್ಲಪ್ಪ ಕಾಶಿ, ಮುಜಾಹಿದ್ ಜುನೈದಿ, ಬಸವರಾಜ್ ಮೈನಾಳಕರ್, ಪಪ್ಪು ಕಾಶಿ, ಶರಣು ಮರಗೋಳ ಸೇರಿದಂತೆ ಅನೇಕರಿದ್ದರು.

