ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಜನ್ಮ ದಿನಾಚರಣೆಗೆ ಚಿತ್ತಾಪುರ ಮುಖಂಡರಿಂದ ಶುಭಹಾರೈಕೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಗಂಗಾ ನಗರದ ಮಾಣಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ 72 ನೇ ಜನ್ಮದಿನದ ಸಮಾರಂಭದಲ್ಲಿ ಚಿತ್ತಾಪುರ ಮುಖಂಡರಿಂದ ಕೇಕ್ ಕತ್ತರಿಸಿ, ಮೈಸೂರು ಪೇಟ್ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಶುಭಾಶಯಗಳು ಕೋರಲಾಯಿತು.
ಈ ವೇಳೆ ಚಿತ್ತಾಪುರ ತಾಲೂಕು ಕೋಲಿ ಸಮಾಜದ ಉಪಾಧ್ಯಕ್ಷ ಕಾಶಪ್ಪ ಡೋಣಗಾಂವ, ಪತ್ರಕರ್ತ ಕಾಶಿನಾಥ ಗುತ್ತೇದಾರ, ಮುಖಂಡರಾದ ಭೀಮು ಸಾಲಿ ರಾಜೋಳ್ಳಾ, ನಾಗಪ್ಪ ಹೊನ್ನಪನೋರ್, ಮೌನೇಶ್ ರಾಜೋಳ್ಳಾ ಇದ್ದರು.
ಕೋಲಿ ಗಂಗಾಮತ ಸಮಾಜದ ರಾಜ್ಯಾಧ್ಯಕ್ಷ ಮೋಹನಕುಮಾರ, ಡಾ.ಕಾಮರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಪ್ರಮುಖರಾದ ಶಂಕು ಮ್ಯಾಕೇರಿ, ಮಲ್ಲಿಕಾರ್ಜುನ ಕುಸ್ತಿ ಧರ್ಮರಾಜ್ ಜವಳಿ ನೀಲಕಂಠ ಜಮಾದಾರ್, ಶ್ರೀಮಂತ ಹೋಳ್ಕರ್, ಮಲ್ಲಪ್ಪ ಹೊಸಮನಿ, ಮಲ್ಲಿಕಾರ್ಜುನ ಕಾಳಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ದೀಪಕ್ ಹೊಸ್ಸುರಕರ್, ದೇವಿಂದ್ರ ಹಾದಿಮನಿ, ರಮೇಶ್ ನಾಟೀಕಾರ,ವಿಜಯಕುಮಾರ್, ಶಿವುಕುಮಾರ ಸುಣಗಾರ, ಡಾ.ಶರಣಪ್ಪ ಸೈದಾಪುರ, ಜಯಪ್ರಕಾಶ್ ಕಮಕನೂರ, ಸಂದೇಶ ಕಮಕನೂರ, ಸುರೇಶ್ ಕಮಕನೂರ, ಸಿದ್ದು ಸಣ್ಣೂರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಹೇಶ್ ಚಿಂತಪಳ್ಳಿ, ರಾಧಾಬಾಯಿ ಅವರು ಪ್ರಾರ್ಥಿಸಿದರು, ಅರ್ಜುನ್ ಹಾವನೂರು ಸ್ವಾಗತಿಸಿದರು, ನಿಂಗಣ್ಣ ನಿರೂಪಿಸಿದರು.