ಸನ್ನತಿಯಲ್ಲಿ ಜಂಗಮ ವಟುಗಳಿಗೆ ಬೇಸಿಗೆ ಸಂಸ್ಕಾರ ಶಿಬಿರಕ್ಕೆ ಚಾಲನೆ, ಮಕ್ಕಳಿಗೆ ಸಂಸ್ಕಾರ ನೀಡಿ ವಿದ್ಯಾವಂತರನ್ನಾಗಿ ಮಾಡಲು ದಿಗ್ಗಾಂವ ಶ್ರೀ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಮ್ಮ ದೇಶ ಸಂಸ್ಕೃತಿ ಸಂಸ್ಕಾರಕ್ಕೆ ಬಹಳ ಮಹತ್ವ ಹೊಂದಿದೆ ಆದಕಾರಣ ಮೂರು ವರ್ಷದ ಬುದ್ಧಿ ನೂರು ವರ್ಷ ಎನ್ನುವ ಹಾಗೆ ತಂದೆ ತಾಯಿಗಳಾದವರು ಮಕ್ಕಳಿಗೆ ಸಂಸ್ಕಾರ ಕೊಟ್ಟು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯರು ಕರೆ ನೀಡಿದರು.
ತಾಲೂಕಿನ ಸನ್ನತಿಯಲ್ಲಿ ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ ಗುರುಕುಲ ವತಿಯಿಂದ ಹಮ್ಮಿಕೊಂಡಿದ್ದ ಜಂಗಮ ವಟುಗಳಿಗೆ ಬೇಸಿಗೆ ಧಾರ್ಮಿಕ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದರು ಅವರು, ಸನ್ನತಿಯಲ್ಲಿ ಮೂರು ವರ್ಷದಿಂದ ಜಗದೀಶ್ ಶಾಸ್ತ್ರಿಗಳು ಸತತವಾಗಿ ನಮ್ಮ ಸನ್ನಿದಾನ ದಲ್ಲಿ ಬೇಸಿಗೆ ಸಂಸ್ಕಾರ ಶಿಬಿರ ನೆರವೇರಿಸಿಕೊಂಡು ಬರುವಂಥದ್ದು ನಮಗೆ ಸಂತೋಷ ತಂದಿದೆ ನಮಗೆ ನಮ್ಮ ಶ್ರೀಮಠ ಮತ್ತೆ ನಮ್ಮ ಸನ್ನತಿ ದೇವಸ್ಥಾನ ಎರಡು ನಮಗೆ ಒಂದೇ ಅನ್ನೋ ಭಾವ ಮೂಡಿದೆ ಎಂದು ಹೇಳಿದರು.
ವೇ. ಲಿಂಗಯ್ಯಸ್ವಾಮಿ ಗುಡಿ ಸಂಸ್ಥಾನ ಮಠ, ವೇ. ಉಮೇಶಸ್ವಾಮಿ ಹಿರೇಮಠ ಇವರ ಸಮ್ಮುಖದಲ್ಲಿ, ಮಲ್ಲಿನಾಥ್ ಗೌಡ ಮಾಲಿ ಪಾಟೀಲ, ಮಂಜುನಾಥ್ ಗೌಡ ಪೊಲೀಸ್ ಪಾಟೀಲ್ ಇವರ ನೇತೃತ್ವದಲ್ಲಿ ಚಂದ್ರಶೇಖರ್ ಸಾಹು ಅವನೂರ, ಮಾದೇವಪ್ಪ ಸಾವು ಅನವಾರ, ತಾಲೂಕು ಬೇಡ ಜಂಗಮ ಸಮಾಜದ ಉಪಾಧ್ಯಕ್ಷ ನಾಗಯ್ಯ ಸ್ವಾಮಿ ಮಾಲಗತ್ತಿ, ವೀರಣ್ಣಯ್ಯ ಸ್ವಾಮಿ ಗುಲ್ಬರ್ಗ, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಪ್ರಸಾರಂಗದ ಉಪನಿರ್ದೇಶಕ ಡಾ.ಮಲ್ಲಣ್ಣ ಗೌಡ ಎಸ್, ವಿದ್ವಾನ್ ಮಲ್ಲನಗೌಡ ಮಾಲಿ ಪಾಟೀಲ್, ಕಿರಿಯ ಸಹಾಯಕ ಸುರೇಶ್ ಬಿ ಆರ್, ಶಿವಯ್ಯ ಸ್ವಾಮಿ ಗುಡಿ ಸಂಸ್ಥಾನ ಮಠ, ಮಲ್ಲನಗೌಡ ಶ್ರೀಮದಿ ಸೋಮು ಪೂಜಾರಿ, ವಿಶ್ವನಾಥ್ ನಿಂಗನೂರ್, ವೇದಮೂರ್ತಿ ರೇವಣಸಿದ್ದಯ್ಯ ಸ್ವಾಮಿ ಸಂಸ್ಥಾನ ಮಠ, ವೇದಶ್ರೀ ಜಗದೀಶ್ವರ ಸ್ವಾಮಿ ಸಂಸ್ಥಾನ ಮಠ, ವೇದಶ್ರೀ ಅಭಿಷೇಕ್ ಸ್ವಾಮಿ ಸೈದಾಪುರ್, ವೇದಮೂರ್ತಿ ಗಡಿಲಿಂಗಯ್ಯ ಸ್ವಾಮಿ ಸಂಸ್ಥಾನ ಮಠ, ವೇದಶ್ರೀ ಪಂಚಾಕ್ಷರಿ ಸ್ವಾಮಿ ಸಂಸ್ಥಾನ ಮಠ, ಊರಿನ ಹಿರಿಯರು ಜಂಗಮ ವಟುಗಳ ತಂದೆ-ತಾಯಿಯಂದಿರು ಉಪಸ್ಥಿತರು ಇದ್ದರು. ಗುರುಕುಲ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು, ಸ್ವಾಗತ ಗಡ್ಡಿಲಿಂಗಯ್ಯ ಸ್ವಾಮಿ ಸ್ವಾಗತಿಸಿದರು, ರೇವಣಸಿದ್ದಯ್ಯ ಶಾಸ್ತ್ರಿಗಳು ಸನ್ನತಿ ನಿರೂಪಿಸಿದರು.