ವಾಡಿ (ಜಂ) ರೈಲ್ವೆ ನಿಲ್ದಾಣದಲ್ಲಿ ರೈಲುಗಳು ನಿಲ್ಲಿಸಲು ಆಗ್ರಹಿಸಿ ಮುಂಬೈ ಕೇಂದ್ರ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಕರವೇ ಮನವಿ
ನಾಗಾವಿ ಎಕ್ಸಪ್ರೆಸ್
ವಾಡಿ: ಎಲ್ಲಾ ಕಡೆಯಿಂದ ಬರುವ ಹಾಗೂ ಹೋಗುವ ರೈಲುಗಳು ವಾಡಿ(ಜಂ) ನಲ್ಲಿ ನಿಲ್ಲಿಸಲು ಹಾಗೂ ರೈಲುಗಳನ್ನು ವಿಸ್ತರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ವಾಡಿ ವಲಯ ಅಧ್ಯಕ್ಷ ಶಿವಕುಮಾರ್ ಗುತ್ತೇದಾರ ನೇತೃತ್ವದಲ್ಲಿ ಮುಖಂಡರು ಮುಂಬೈ ಕೇಂದ್ರ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಮುಂಬೈ, ಹೈದ್ರಾಬಾದ, ಬೆಂಗಳೂರು ಮೂರು ರಾಜ್ಯಗಳಿಂದ ಜನರು ಇಲ್ಲಿ ಪ್ರಯಾಣ ಮಾಡುತ್ತಾರೆ. ವಾಡಿ(ಜಂ) ಇರುವುದರಿಂದ ಜನರು ದಿನಾಲು ಪ್ರಯಾಣ ಬೆಳೆಸುವುದನ್ನು ಕಂಡಿದ್ದೇವೆ ಜನರಿಗೆ ಅನಾನುಕೂಲ ಆಗಿರುವುದನ್ನು ಕಂಡಿದ್ದೇವೆ ಹಾಗಾಗಿ ಕೆಲವು ರೈಲುಗಳನ್ನು ವಾಡಿ(ಜಂ) ನಿಲ್ಲಿಸಲು ಹಾಗೂ ಕೆಲವು ರೈಲುಗಳನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿಕೊಂಡರು.
ಒಂದೇ ಭಾರತ ರೈಲು (22231-22232) ನಿಲ್ಲಬೇಕು, ಫಲಕನಾಮ್ ಇಂದ ವಾಡಿವರೆಗೆ ಇರುವ ಈ ರೈಲನ್ನು ಕಲಬುರ್ಗಿ ವರೆಗೆ ವಿಸ್ತರಿಸಬೇಕು (07752-07751), (07762) ಬೀದರ ಡೆಮ್ಮೂ ರೈಲನ್ನು ಕಲಬುರ್ಗಿಯಿಂದ ವಾಡಿ(ಜಂ) ವರೆಗೆ ವಿಸ್ತರಿಸಬೇಕು, (07748) ಬೀದರದಿಂದ ಕಲಬುರ್ಗಿ ವರೆಗೆ ಇರುವ ಡೆಮ್ಮೂ ರೈಲನ್ನು ವಾಡಿ(ಜಂ) ವರೆಗೆ ವಿಸ್ತರಿಸಬೇಕು (22155-22156), ಕಲಬುರ್ಗಿಯಿಂದ ಕೊಲ್ಹಾಪುರ ಇರುವ ರೈಲನ್ನು ವಾಡಿ(ಜಂ) ಇಂದ ಪ್ರಾರಂಭಿಸಬೇಕು, ಹಾಗೂ ಕೊಲ್ಹಾಪುರ ಇಂದ ಕಲಬುರ್ಗಿವರೆಗೆ ಇರುವ ರೈಲನ್ನು ವಾಡಿ(ಜಂ) ವರೆಗೆ ವಿಸ್ತರಿಸಬೇಕು, ವಾಡಿ(ಜಂ) ಇರುವ ಕಾರಣ ಬೇರೆ ಬೇರೆ ರಾಜ್ಯಗಳಿಂದ ರೈಲುಗಳು ಹಾದುಹೋಗುವ ಕಾರಣ ಈ ರೈಲುಗಳು ವಾಡಿ(ಜಂ) ಗೆ ನಿಲ್ಲಿಸಲು ಮನವಿ ಮಾಡಿದ್ದಾರೆ.
ಈ ಮನವಿಯನ್ನು ಸ್ಪಂದಿಸಿ ರೈಲುಗಳನ್ನು ನಿಲ್ಲಿಸುವ ಮುಖಾಂತರ ಇಲ್ಲಿನ ಸಾಕಷ್ಟು ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಹೋಗಿಬರಲು ಅನುಕೂಲ ಮಾಡಿಕೊಡಬೇಕು.
ಒಂದು ವೇಳೆ ಈ ಮನವಿಯನ್ನು ಸ್ಪಂದಿಸದೇ ನಿರ್ಲಕ್ಷ್ಯ ಮಾಡಿದರೆ ಮುಂಬರುವ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವಾಡಿ ಘಟಕ ಹಾಗೂ ಚಿತ್ತಾಪುರ ತಾಲೂಕ ವತಿಯಿಂದ ರೈಲು ರೋಕೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಪ್ರೇಮ್ ಜೋಶಿ, ಸಾಬಯ್ಯಾ ಗುತ್ತೇದಾರ, ಸುಂದರ್ ತುಮಕೂರ್, ಈಶ್ವರ್ ಹೊಸಮನಿ ಇದ್ದರು.

