Oplus_131072

ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ, ಅಹಲ್ಯಾಬಾಯಿ ಹೋಳ್ಕರ್ ಅವರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ: ದೊಡ್ಡನಗೌಡ ಪಾಟೀಲ್ 

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: 300 ವರ್ಷಗಳ ಹಿಂದೆ ಮೊಘಲರ ದಾಳಿಯಿಂದ ಹಾನಿಗೊಳಗಾದ ಜೋತಿರ್ಲಿಂಗ ತೀರ್ಥಕ್ಷೇತ್ರಗಳ ಪುನರುಜ್ಜೀವನಗೊಳಿಸಿದ ಧೀರೊದಾತ್ತ ಮಹಾರಾಣಿಯಾಗಿದ್ದವರು ಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಕುಷ್ಟಗಿ ಶಾಸಕ, ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅಬಿಪ್ರಾಯಪಟ್ಟರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದಿಗೂ ಮಹಿಳೆಯರು ಧೈರ್ಯದಿಂದ ಹೊರಬಂದು ಕೆಲಸ ಮಾಡುವ ಪರಿಸ್ಥಿತಿ ಇಲ್ಲದಿರುವಾಗ 300 ವರ್ಷಗಳ ಹಿಂದೆ ಮೊಘಲರ, ತುರುಕರ ದಾಳಿಗೆ ಈಡಾಗಿ ನಾಶಗೊಂಡಿದ್ದ ದೇಗುಲಗಳನ್ನು ಆಗಿನ ಕಾಲಕ್ಕೆ 16 ಕೋಟಿ ರೂ. ವ್ಯಯಿಸಿ ಹಿಮಾಲಯದ ಗಂಗೋತ್ರಿಯಿಂದ ರಾಮೇಶ್ವರದವರೆಗೆ ದೇವಾಲಯಗಳ ಜೀರ್ಣೋದ್ದಾರ ಮಾಡಿದ ಮಹಾಮಾತೆಯ ಕಾರ್ಯುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಹೇಳಿದರು.

ಇಂತಹ ಮಹಾನ್ ಕಾರ್ಯ ಮಾಡಿದ ಅಹಲ್ಯಾಬಾಯಿ ಅವರ ಬಗ್ಗೆ ದೇಶದ ಜನತೆಗೆ ತಿಳಿಸಿಕೊಡಬೇಕಿತ್ತು ಆದರೆ ಈ ಹಿಂದೆ ದೇಶ ಆಳಿದ ಪಾಪಿ ಕಾಂಗ್ರೆಸ್ ಇಂತಹ ಮೇರು ಸಾಧಕಿಯ ಪರಿಚಯ ಮಾಡಿಕೊಡದೇ ಮುಚ್ಚಿಹಾಕಿತ್ತು. ಯಾವಾಗ ದೇಶಕ್ಕೆ ನರೇಂದ್ರ ಮೋದಿಜೀ ಪ್ರಧಾನಿಯಾದರೋ ಅಗಿನಿಂದ ಇಂತಹ ಮುಚ್ಚಿಹಾಕಲ್ಪಟ್ಟ ಸತ್ಯಗಳನ್ನು ಸಾಧಕರನ್ನು ಹೊರತಂದು ಜನತೆಗೆ ಪರಿಚಯಿಸುವ ಮೂಲಕ ಭಾರತದ ಹಿಂದುಗಳನ್ನು ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಈ ಕಾರ್ಯದ ಭಾಗವಾಗಿ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನ ದೇಶಾದ್ಯಂತ ಆಚರಣೆ ಮಾಡುವಂತಾಗಿದೆ ಎಂದರು.

ಇಂತಹ ಸತ್ಯ ಮುಚ್ಚಿಟ್ಟು ಸುಳ್ಳಿಗೆ ಹುಟ್ಟಿ ಸುಳ್ಳಿಗೆ ಬದುಕಿ ಹೋಗುತ್ತಿದ್ದ 100 ಕೋಟಿ ಹಿಂದುಗಳಿಗೆ ಸತ್ಯ ತಿಳಿಸುವ ಮೂಲಕ ಹಿಂದುಗಳ ಗತ ವೈಭವದ ಭವ್ಯ ಪರಂಪರೆಯನ್ನು ಹಿಂದುಗಳಿಗೆ ತಿಳಿಸಿಕೊಡುವ ಕೆಲಸ ಆಗುತ್ತಿದೆ ಹಿಂದುಗಳ ಜಾಗೃತಿ ಆಗುತ್ತಿದೆ, ಒಗ್ಗಟ್ಟು ಮೂಡುತ್ತಿದೆ ಭವ್ಯ ಭವಿಷ್ಯ ಕಟ್ಟುವ ನಿಟ್ಟಿನಲ್ಲಿ ಮೋದಿಜಿ ಸರ್ಕಾರ ಅತ್ಯಂತ ಬಲಾಢ್ಯವಾಗಿ ಕೆಲಸ ಮಾಡುತ್ತಿದೆ ಎಂದು ನುಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ ಮಾತನಾಡಿ, ಆಗಿನ ಕಾಲಕ್ಕೆ ಒಬ್ಬ ಮಹಿಳೆಯಾಗಿ ಧರ್ಮ, ಸಂಸ್ಕೃತಿ ರಕ್ಷಣೆ ಮಾಡಿದ್ದು ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ, ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪೂರ ಮಾತನಾಡಿ, ಅಹಲ್ಯಾಬಾಯಿ ಹೋಳ್ಕರ್ ಅವರ ಬಗ್ಗೆ ಯಾವ ಪಠ್ಯದಲ್ಲಿಯೂ ಉಲ್ಲೇಖ ಇಲ್ಲದಂತೆ ಕಾಂಗ್ರೆಸ್‌ನ ತುಘಲಕ್ ಆಡಳಿತ ಇತಿಹಾಸಕ್ಕೆ ಅಪಚಾರ ಮಾಡಿತ್ತು. ಆದರೆ ಕೇಂದ್ರದ ಮೋದಿ ಸರ್ಕಾರ ಮುಚ್ಚಿಹೋಗಿದ್ದ ಮಹಾನ್ ಸಾಧಕರನ್ನು ಗುರ್ತಿಸಿ ಗೌರವಿಸಿ ದೇಶಕ್ಕೆ ಪರಿಚಯಿಸುವ ಮೂಲಕ ಈ ನೆಲದ ಜನರನ್ನು ಒಗ್ಗೂಡಿಸುವುದಲ್ಲದೇ ಗಟ್ಟಿಯಾಗಿ ಬೆಳೆಸುವ ಕೆಲಸ ಮಾಡುತ್ತಿರುವುದು ಗಮನಿಸಬೇಕು ಈ ಪರಂಪರೆಯಲ್ಲಿ ಬರುವವರೆಲ್ಲರೂ ಒಂದೇ ವೇದಿಕೆಯತ್ತ ಬಂದು ಒಗ್ಗೂಡಿ ಮುಂದೆ ಸಾಗಲು ಅನುಕೂಲ ಮಾಡಿಕೊಡುತ್ತಿದೆ ಎಂದರು.

ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ದೇಶದ ಗತ ಕಾಲದಲ್ಲಿ ಇಂತಹ ಸಾಧನೆ ಮಾಡಿದ ಅನೇಕರು ಇದ್ದರೂ ಸಹ ಅವರ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡದ ಈ ಹಿಂದೆ ಆಳಿದವರು ಇತಿಹಾಸಕ್ಕೆ, ಸಂಸ್ಕೃತಿ, ಪರಂಪರೆಗೆ ನಿತ್ಯ ಅತ್ಯಾಚಾರ ಮಾಡಿಕೊಂಡು ಬರಲಾಗಿದ್ದು, ಈಗೀಗ ದೇಶವಾಸಿಗಳಿಗೆ ಗೊತ್ತಾಗತೊಡಗಿದೆ. ಈ ಮೂಲಕ ಎಲ್ಲರೂ ಒಗ್ಗೂಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಅಹಲ್ಯಾಬಾಯಿ ಅವರ ನಂತರ ಪ್ರಧಾನಿ ನರೇಂದ್ರ ಮೋದಿಜಿ ಅವರು ಎಲ್ಲ ಜೋತಿರ್ಲಿಂಗಗಳ ಕಾರಿಡಾರ್ ಗಳನ್ನು ಮಾಡಿ ಜೋತಿರ್ಲಿಂಗಗಳ ಕ್ಷೇತ್ರಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಿದರು ಎಂದರು.

ವೇದಿಕೆ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರು ಕಾಮಾ, ಪರಶುರಾಮ ಕುರಕುಂದ, ನಗರಾದ್ಯಕ್ಷ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಅಧ್ಯಕ್ಷ ರಾಜಶೇಖರ ಕಾಡಮನೋರ್, ಸಿದ್ದಣ್ಣಗೌಡ ಕಾಡಮ್ ನೋರ್, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಮಹಿಳಾ ಮೋರ್ಚಾ ಜಿಲ್ಲಾದ್ಯಕ್ಷ ಸುನಿತಾ ಚವ್ಹಾಣ, ಪ್ರಧಾನ ಕಾರ್ಯದರ್ಶಿ ರಮಾದೇವಿ ಕಾವಲಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ವೀಣಾ ಮೋದಿ, ನಗರಸಭೆ ಉಪಾದ್ಯಕ್ಷೆ ರುಕಿಯಾ ಬೇಗಂ, ಮಾದ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೇಸೂರ, ಶಹಾಪೂರ ಮಹಿಳಾ ಮೋರ್ಚಾ ಅದ್ಯಕ್ಷೆ ಭಾರತಿ ಜಮುಖಂಡಿ, ನಗರ ಮಹಿಳಾಧ್ಯಕ್ಷೆ ಭೀಮಬಾಯಿ ಶೆಂಡಗಿ, ನಗರಸಭೆ ಸದಸ್ಯ ವಿಜಯಲಕ್ಷ್ಮಿ ನಾಯಕ, ಜಿಲ್ಲಾ ಕಾರ್ಯದರ್ಶಿಗಳಾದ ಶಕುಂತಲಾ ಗುಂಜನೂರ, ಬಾಲಮ್ಮ ಚಂದ್ರಕಲಾ ಗುರುಮಠ ಕಿಲ್ಲನಕೇರಾ, ಸ್ನೇಹಾ ರಸಳಕರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಚೆನ್ನವೀರಯ್ಯ ಹಿರೇಮಠ, ಮಹೇಶರಡ್ಡಿ ಕಮತಗಿ ಸೇರಿದಂತೆ ಇತರರು ಇದ್ದರು.  ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಮ್ಮ ಹೊಸಪೇಟೆ ನಿರೂಪಿಸಿದರು, ಶಹಾಪುರ ಮಹಿಳಾ ಮೋರ್ಚ ಅಧ್ಯಕ್ಷೆ ಭಾರತಿ ಜಮಖಂಡಿ ವಂದನಾರ್ಪಣೆ ಮಾಡಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!