ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಂದನೆ | ಚಿತ್ತಾಪುರ ಯಾದಗಿರಿ ಸಾರಿಗೆ ಬಸ್ಸು ಪ್ರಾರಂಭ ಗ್ರಾಮಸ್ಥರು ಸಂತಸ
ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ
ಚಿತ್ತಾಪುರ ದಿಂದ ಮುಂಜಾನೆ 7 ಗಂಟೆಗೆ ಮತ್ತು ಮಧ್ಯಾಹ್ನ 1 ಗಂಟೆಗೆ ಪ್ರತಿದಿನ ಭೀಮನಹಳ್ಳಿ, ಬೆಳಗೇರಾ, ಯಾಗಾಪುರ ಹಾಗೂ ಯರಗೋಳ, ಯಾದಗಿರ ವರೆಗೆ ಹೋಗಿ ಬರುವ ಬಸ್ಸು ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಗಿತ್ತು, ಇದಕ್ಕೆ ಸ್ಪಂದಿಸಿದ ಸಚಿವರು ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರಿಂದ ಗ್ರಾಮಸ್ಥರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ತಾಪುರದಿಂದ ಭೀಮನಹಳ್ಳಿ, ಬೆಳಗೇರಾ, ಯಾಗಾಪುರ ಹಾಗೂ ಯರಗೋಳ, ಯಾದಗಿರಿ ವರೆಗೆ ಪ್ರತಿದಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ರೈತರು ಹಾಗೂ ಸಾರ್ವಜನಿಕರು ಹೋಗಿ ಬರುವುದಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಬಹಳ ತೊಂದರೆ ಆಗುತ್ತಿದೆ. ಆದ್ದರಿಂದ ತಕ್ಷಣ ಚಿತ್ತಾಪುರ ಬಸ್ ಘಟಕದಿಂದ ಮುಂಜಾನೆ 7 ಗಂಟೆಗೆ ಮತ್ತು ಮದ್ಯಾಹ್ನ 1 ಗಂಟೆಗೆ ಚಿತ್ತಾಪುರ ದಿಂದ ಭೀಮನಹಳ್ಳಿ, ಬೆಳಗೇರಾ, ಯಾಗಾಪುರ ಹಾಗೂ ಯರಗೋಳ, ಯಾದಗಿರಿ ವರೆಗೆ ಬಸ್ಸು ಪ್ರಾರಂಭಿಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹಾಗೂ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಸಚಿವರಿಗೆ ಕಳೆದ ಜೂ.30 ರಂದು ಮನವಿ ಪತ್ರ ಸಲ್ಲಿಸಲಾಗಿತ್ತು ಎಂದು ಎನ್.ಎಸ್.ಯು.ಐ ಮಾಜಿ ಉಪಾಧ್ಯಕ್ಷ ಬಸಯ್ಯ ಸ್ವಾಮಿ ಹಿರೇಮಠ ಬೆಳಗೇರಾ ತಿಳಿಸಿದ್ದಾರೆ.
ಗ್ರಾಮಸ್ಥರ ಮನವಿಗೆ ಸಚಿವರು ಸ್ಪಂದಿಸಿದ್ದರಿಂದ ಸೋಮವಾರ ಚಿತ್ತಾಪುರ ಯಾದಗಿರಿ ಸಾರಿಗೆ ಬಸ್ಸು ಪ್ರಾರಂಭವಾಗಿದೆ, ಗ್ರಾಮಸ್ಥರು ಸೇರಿ ಸಾರಿಗೆ ಬಸ್ಸಿಗೆ ತಳಿರು ತೋರಣಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿ ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಸವರಾಜ ತೆಲಗೂರ್, ಲಕ್ಷ್ಮೀಕಾಂತ್ ಗುತ್ತೇದಾರ, ದೇವಪ್ಪ ಕಂದಕೂರ, ಪ್ಯಾರುಮಿಯ್ಯ, ಪ್ರವೀಣ್ ಕುಮಾರ್ ಮತ್ತು ಬೆಳಗೇರಾ ಗ್ರಾಮಸ್ಥರು ಹಾಜರಿದ್ದರು.

